Saturday, June 23, 2007

ಒಂಬತ್ತು, ಎಂಟು, ಎಂಟು...


ತುಸುವೇ ತಳ್ಳಿದರೂ ಬ್ದಿದುಹೋಗುವಂತ್ದಿದ ದಣಪೆಯನ್ನು ಓರೆ ಮಾಡಿ ದೇವಿ ರಸ್ತೆಗೆ ಬಂದಾಗ ಕವಿದ ಮೋಡಗಳಿಂದಾಗಿ ಮಧ್ಯಾಹ್ನದ ಹಗಲು ಎಣ್ಣೆ ತೀರುತ್ತ ಬಂದ ದೀಪದಂತಿತ್ತು. ಅವಳು ಊರಿಗೆ ಮನೆ ಕೆಲಸಕ್ಕೆಂದು ಬಂದು ಆಗಲೇ ಆರು ತಿಂಗಳಿಗಿಂತಲೂ ಹೆಚ್ಚೇ ಇರಬೇಕು.


ಇಲಿಗೆ ಬಂದ ಮೊದಲಿಗೆ ದೇವಿ `ನಾನು ಬಂದು ಇಪ್ಪತ್ತು ದಿನ ಆಯ್ತು, ತಿಂಗಳಾಯ್ತು, ನೂಲು ಹಬ್ಬಕ್ಕೆ ಮೂರು ತಿಂಗಳು' ಎಂದ್ಲೆಲ ಲೆಕ್ಕ ಹಾಕುತ್ತ್ದಿದಳು. ಈಗೀಗ ಅದನ್ನು ನ್ಲಿಲಿಸ್ದಿದಾಳೆ. ಆ ದಿನಗಳು ನ್ಲಿಲದೆ ಮುಂದೆ ಹೋಗುತ್ತಿರುವಾಗ ಹಿಂದಿನಿಂದ ಅವುಗಳ ಲೆಕ್ಕವನ್ನು ದೇವಿ ಮಾಡದೆ ಅವುಗಳೊಂದಿಗೆ ಹೋಗುತ್ತ್ದಿದಳು.

ದೇವಿಗೆ ರಸ್ತೆಯ್ಲಲಿ ಸಾಗುವ ವಾಹನಗಳ ನಡುವೆ ಹಾದಿ ಬಿಡಿಸಿಕೊಂಡು ಹೋಗುವುದೆಂದರೆ ಜೀವ ಕುತ್ತಿಗೆಗೆ ಬರುತ್ತಿತ್ತು. ಈಗ ಈ ಊರಿನ ಎಲ ವೈವಾಟೂ ಅವಳಿಗೆ ಆಗಿದೆ. ಬೆಳಿಗ್ಗೆ ಎದು ಹಾಲನ್ನು, ತುಸು ದೂರವೇ ಇರುವ ಮೀನಿನ ಅಂಗಡಿಯಿಂದ ಮೀನನ್ನು ಅವಳೇ ತರುತ್ತ್ದಿದಳು. ಈಗವಳು ಮನೆಯ್ಲಲಿ ಉಂಡು ಚಾಪೆಯ ಮೇಲೆ ಅಡ್ಡವಾಗಿರುವ ಮಂಕಾಳಜ್ಜಿಗೆ ಗುಳಿಗೆಗಳನ್ನು ತರಬೇಕಿತ್ತು. ಏನೇನೋ ಮನಸ್ಸಿಗೆ ಹಚ್ಚಿಕೊಂಡು ಆ ಅಜ್ಜಿಗೆ ರಾತ್ರಿ ನ್ದಿದೆಯೇ ಬರುತ್ತಿರಲ್ಲಿಲ. ಆಗಾಗ ರಕ್ತದ ಒತ್ತಡ ಏರಿ ಬಡಬಡಿಸುವುದೂ ನಡೆಯುತ್ತಿತ್ತು. ದೇವಿ ಈಗ ಅಜ್ಜಿ ಮಲಗಿರುವಾಗಲೇ ಗುಳಿಗೆಗಳನ್ನು ತಂದುಬಿಡುವಾ ಎಂದು ಹೊರಟ್ದಿದಳು
ತೆಂಕಣಕೇರಿಯ ರತ್ನ ಅಕ್ಕೋರು ದೇವಿಯನ್ನು ಅವಳ ಅವ್ವ ಸಾವಿತ್ರಿಗೆ ಕಬೂಲು ಮಾಡಿಸಿ ಮನೆ ಕೆಲಸಕ್ಕೆಂದು ಕಳಿಸಿಕೊಟ್ಟ್ದಿದರು. `ನಾನೂ ಎಲೂ ಹೋಗೂದ್ಲಿಲ, ಇಲೇ ಇರ್‍ತೆ' ಎಂದ ದೇವಿಯ ಹಠವನ್ನು ಕೆಲವು ಹಸಿರು ಕೋರಾ ನೋಟುಗಳನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ರತ್ನ ಅಕ್ಕೋರಿಗೆ ಮಾತು ಕೊಟ್ಟು ಬಂದ್ದಿದ ಸಾವಿತ್ರಿ `ಬಾಯಿ ಬಿಟ್ಟರೆ ನೋಡು. ನಿನ್ನ ಮದ್ವೆ ಮಾಡುವವರು ಯಾರು? ನಮಗೇನು ನಿಮ್ಮ ಅಜ್ಜ ಮಾಡಿಟ್ಟ ಆಸ್ತಿ ಇದ್ಯೇನೆ? ಅಕ್ಕನಂಗೆ ಇಲೇ ಇದು, ಯಾರ ಸಂಗತಿಗಾದರೂ ಓಡಿ ಹೋಗ್ತಿಯೋ ನೋಡ್ತೆ. ಸುಮ್ಮನೆ ನಾನ ಹೇಳದಂಗೆ ಕೇಳು' ಎಂದವಳೇ ತಲೆ ಕೆಳಗಾಗಿ ನೇತಾಡುವ ಕೋಳಿಗಳನ್ನು ಹಿಡಿದು ಅವನ್ನು ಮಾರಲು ಆಡೂಕಟ್ಟೆ ಕಡೆ ನಡೆದಳು.

ದೇವಿಯ ಕಣ್ಣಿನ ಮುಂದೆ ಬೇರೆ ಹಾದಿಗಳೇ ಇರಲ್ಲಿಲ. ಅವಳ ಹಾಗೆಯೇ ಅರ್ಧಕ್ಕೆ ಶಾಲೆ ಬಿಟ್ಟ ಊರಿನ ಪೋರಿಯರಾದ ಮಾಲಾ, ರುಕ್ಮಿಣಿ, ಗುಲಾಬಿಯರು, ತಾವು ಮಾರುತ್ತ್ದಿದ ಹೂವು, ತೆಂಗಿನಕಾಯಿ, ಹಿತ್ತಲ ವ್ಯವಹಾರಗಳನ್ನು, ಏಕಾಏಕಿ ಇಲಿನ ಕೆಲಸಗಳನ್ನು ತಮ್ಮ ತಂಗಿಯರಿಗೆ ವಹಿಸಿ ಬಸ್ಸುಗಳನ್ನು ಹತ್ತ್ದಿದರು. ಮುಂಬಯಿ, ಹುಬ್ಬಳ್ಳಿ, ಹೈದ್ರಾಬಾದು ಎಂದ್ಲೆಲ ಮನೆ ಕೆಲಸಕ್ಕೆಂದು ಹೋದ ಅವರು, ಊರಿನ ಬಂಡಿ ಹಬ್ಬಕ್ಕೆ ಬಂದಾಗ ಬಣ್ಣದ ಬಟ್ಟೆ ಹಾಕಿಕೊಂಡು ದೇವಿಗೆ ಅರ್ಥವಾಗದ ಅಲಿನ ಭಾಷೆ ಮಾತಾಡುತ್ತ ಅವಳಿಗೆ ಗಡಿಬಿಡಿ ಆಗುವಂತೆ ಮಾಡುತ್ತ್ದಿದರು. ಅವರ ಮಾತಿನಿಂದ ದೇವಿ ಕೆಂಗೆಡುತ್ತ್ದಿದಳು. ಅವರ ವರ್ಣನೆಯ ಊರುಗಳು ದೇವಿಯನ್ನು ಕನಸಿನ ತೀರಗಳಿಗೇನೂ ಕರೆದಿರಲ್ಲಿಲ. ಚೂರುಪಾರು ದುಡ್ಡನ್ನು ಮನೆಗಳಿಗೆ ಕಳಿಸುತ್ತ್ದಿದ ಆ ಹುಡುಗಿಯರ ತೂಕ ಊರವರ ದೃಷ್ಟಿಯ್ಲಲಿ ಒಂದು ಗುಂಜಿಯಷ್ಟಾದರೂ ಹೆಚ್ಚಾಗ್ದಿದು ಖರೆ ಎಂಬುದು ಸಣ್ಣವಳಾದ ಅವಳಿಗೂ ತಿಳಿಯುತ್ತಿತ್ತು.
`ಅಕ್ಕ ಹಂಗೆ ಯಾರ ಸಂಗ್ತಿಯಾದರೂ ಓಡಿ ಹೋಗ್ತಿಯೊ ನೋಡ್ತೆ' ಎಂದ ಅವ್ವನ ಮಾತು, ಉಪ್ಪ್ದಿದರೆ, ಗಂಜಿ ಇಲದ, ಗಂಜಿಯ್ದಿದರೆ ಉಪ್ಪ್ಲಿಲದ ತಮ್ಮ ಮನೆ ಸ್ಥಿತಿ `ದಾಗಲಿ ಹೋಗಿಯೇ ಬಿಡುವ' ಎಂದುಕೊಳ್ಳುವಂತೆ, ಗಟ್ಟಿ ಮನಸ್ಸು ಮಾಡುವಂತೆ ಮಾಡಿದವು. ಆ ಹಡಬೆ ಅಕ್ಕ ನೀಲಾ ಯಾರೊಂದಿಗೊ ಓಡಿ ಹೋಗಿ, ಊರವರು `ಸಾವಿತ್ರಿಗೆ ಒಬ್ಬ ಪುಕಟ್ ಒಬ್ಬ ಅಳಿಯ ಸಿಕ್ಕ' ಎಂದು ನಗಾಡುವಂತೆ ಆಗಿತ್ತು. ಅಕ್ಕ ಹೋಗ್ದಿದು ಯಾರೊಂದಿಗೆ, ಅವನು ಎಲಿಯವನು ಎಂಬುದು ಇಲಿಯವರೆಗೆ ಪತ್ತೆ ಹತ್ತದ ಸಂಗತಿಯಾಗಿತ್ತು. ಅವಳೊಂದು ಮನೆಗೆ ಪತ್ರ ಬರೆಯಬಹುದು, ಒಂದು ತಾರು ಬಿಡಬಹುದು, ಇಲ ಗಂಡನೊಂದಿಗೆ ಮನೆಗೇ ಬರಬಹುದು ಎಂದು ದೇವಿ, ಸಾವಿತ್ರಿಯರು ಅಂದುಕೊಂಡು ಸುಳ್ಳಾಗಿತ್ತು. ಅಕ್ಕನಂತೆ ನಾನು ಆಗಬಾರದು ಅಂದುಕೊಂಡು ದೇವಿ ಪೂರ್ವ ನಿರ್ಧಾರದಂತೆ ಜೋರು ಮಳೆಯ್ಲಲಿ ರತ್ನ ಅಕ್ಕೋರ ತಂಗಿ ಇರುವ ಊರಿಗೆ ಬಸ್ಸು ಹತ್ತ್ದಿದಳು. ಆ ಸಮಯದ್ಲಲಿ ಊರ್‍ಲಲಿ ಬತ್ತ ಸಸಿಗಳನ್ನು ನೆಟ್ಟಿ ಮಾಡಲು ಜನರು ಹಣಕ್ದಿದ ಸಮಯವಾಗಿತ್ತು.





ಗುಳಿಗೆ ತಕ್ಕೊಂಡು ದೇವಿ ಮರಳುತ್ತಿರುವಾಗ ಅವಳ ಕೈಯ್ಲಲಿನ ಮೊಬೈಲು ಕಿಣಿಕಿಣಿ ಅಂದಿತು. `ಓಹ್ ಮಾಸ್ತರದು' ಅಂದುಕೊಳ್ಳುತ್ತ ದೇವಿ ಕೈಯ್ಲಲಿನ ಚೀಲವನ್ನು ಕಂಕುಳಿಗೆ ಸಿಕ್ಕಿಸಿ ಮಾತಿಗೆ ಕಿವಿಕೊಟ್ಟಳು. ಪದ್ಮಾವತಿ ಅಕ್ಕೋರ ಗಂಡನನ್ನು ದೇವಿ `ಮಾಸ್ತರೇ' ಎಂದೇ ಕರೆಯುತ್ತ್ದಿದಳು. ಅವರೇನೊ ದೇವಿಯ ಬಾಯಿಗೆ ಬಾರದ ಯಾವುದೋ ಒಂದು ಕೆಲಸ ಮಾಡುತ್ತ್ದಿದರು. ಮಧ್ಯಾಹ್ನ ಉಂಡಾದ ಮೇಲೆ ಒಂದು ಸಲ ಅವರು ಆಫೀಸಿನಿಂದ ದೇವಿಗೆ ಕರೆ ಮಾಡುತ್ತ್ದಿದರು. `ಯಾರಾದರೂ ನಮ್ಮ ಮನೆಗೆ ಬಂದ್ದಿದರೆ, ಬೇರೆ ಯಾರದಾದರೂ ಕರೆ ಬಂದಿತ್ತೆ, ಅವ್ವ ಊಟ ಮಾಡಿದಳೆ, ಗುಳಿಗೆ ತಕ್ಕೊಂಡಳೆ' ಇದಿಷ್ಟನ್ನೆ ಅವರು ವಿಚಾರಿಸುತ್ತ್ದಿದುದು. ತಪ್ಪಿಯೂ ಒಂದು ಸಲವೂ `ನಿನ್ನ ಊಟ ಆಯ್ತೆ' ಎಂದು ಕೇಳ್ದಿದು ದೇವಿಗೆ ಜ್ಞಾಪಕದ್ಲಲಿರಲ್ಲಿಲ.

ಮಾಸ್ತರದಾಗಲಿ, ಅಮ್ಮನವರದಾಗಲಿ ಕರೆ ಬಂದಾಗ ದೇವಿ ಒಮ್ಮೊಮ್ಮೆ ಹೊರಗೆ ಎಲಾದರೂ ತಿರುಗಾಡುತ್ತಿರುತ್ತ್ದಿದಳು. ಆಗ್ಲೆಲ `ಮನೆಯ್ಲಲೇ ಇದೇನೆ' ಅನ್ನುತ್ತ್ದಿದಳು. ಇಂಥ ಯಾರ ಅಂಕೆಯ್ಲಿಲದ ಸ್ವಾತಂತ್ರ್ಯಕ್ಕೆ, ಸುಳ್ಳು ಹೇಳಿದರೂ ಆ ಕಡೆಯವರು ನಂಬುವ ಈ ಸಣ್ಣ ಸಾಧನದ ಬಗ್ಗೆ ದೇವಿಗೆ ರೋಮಾಂಚನವಾಗುತ್ತಿತ್ತು. ಅದೊಂದು ಮಾತನಾಡುವ ಮಂತ್ರದಂಡ ಎಂಬುದು ಅವಳಿಗೆ ಖಾತರಿಯಾಗಿತ್ತು. ಹಾಗಾಗಿ ಧೈರ್‍ಯದಿಂದ ಅವಳು ಬಿಸಿಲು ಬಾಡುತ್ತ ಬರುವ ಹೊತ್ತಿನ್ಲಲಿ ಪಾರ್ಕು, ಬೀದಿ ಎಂದ್ಲೆಲ ಮನೆಯ ಹತ್ತಿರದ್ಲಲಿ ಒಬ್ಬಳೇ ಸುಳಿದಾಡುತ್ತ್ದಿದಳು; ಮಂಕಾಳಜ್ಜಿಯನ್ನು ಮನೆಯ್ಲಲಿ ಮಲಗಿಸಿ.

`ಬ್ಲಿಲು ಹೆಚ್ಚು ಬರುತ್ತಿದೆ' ಎಂಬ ಕಾರಣಕ್ಕಾಗಿ ಮನೆಯ್ಲಲಿನ ಫೋನನ್ನು ಪದ್ಮಾವತಿ ಅಮ್ಮನವರು ತೆಗೆಸಿಹಾಕ್ದಿದರು; ದೇವಿ ಬಂದ ಹೊಸತರ್‍ಲಲಿ. ಫೋನನ್ನು ತೆಗೆಸಿಹಾಕ್ದಿದಕ್ಕೆ ಬೇರೆಯದೇ ಕಾರಣವನ್ನು ಮಂಕಾಳಜ್ಜಿ ಕಣ್ಣೀರು ಹಾಕುತ್ತ ದೇವಿಗೆ ಹೇಳ್ದಿದಳು. ಮಗ ಅಜ್ಜಿಯ ಆಸ್ತಿಯನ್ನ್ಲೆಲ ಮಾರಿ ತಾಯಿಯನ್ನು ಇಲಿ ತಂದು ಇಟ್ಟುಕೊಂಡ್ದಿದ. ಆಸ್ತಿಗೆ ಹಕ್ಕುದಾರಳಾದ ತಂಗಿ ಸುಲೋಚನಾ ತಾಯಿಯೊಂದಿಗೆ ಮಾತನಾಡಬಹುದೆಂದು ಫೋನನ್ನೇ ತೆಗೆಸಿಹಾಕ್ದಿದರು. `ಯಾವುದಕ್ಕೂ ಇರಲಿ' ಎಂದು ವಬೈಲ್ ತಂದು, ಅದನ್ನು ಬಳಸುವುದನ್ನು ದೇವಿಗೆ ಹೇಳಿಕೊಟ್ಟ್ದಿದರು. ಅದು ಅಜ್ಜಿಯ ಮೇಲೆ ಲಕ್ಷ್ಯ ಇಡಲು ಇಟ್ಟ್ದದು ಎಂದು ದೇವಿಗೆ ಅನೇಕ ಸಾರಿ ಅನ್ನಿಸುತ್ತಿತ್ತು. ಆ ಮೊಬೈಲ್‌ಗೆ ಮನೆ ಯಜಮಾನರಿಬ್ಬರ ಹೊರತಾಗಿ ಯಾರೂ ಮಾತನಾಡುತ್ತಿರಲ್ಲಿಲ.

ಆದರೂ ಒಮ್ಮೊಮ್ಮೆ ದಾರಿ ತಪ್ಪಿದ ಕರೆಗಳು ಆ ಮೊಬೈಲ್‌ಗೆ ಬರುತ್ತ್ದಿದವು. ಆಗ ದೇವಿಗೆ ಮಜಾ. ಹಾಗೊಮ್ಮೆ ಬಂದ ಕರೆ ``ದೇವಾನಂದ ಇದಾರೆಯೆ?'' ಎಂದು ವಿಚಾರಿಸಿದಾಗ, ದೇವಿ ``ಹೌದು ಇದಾರೆ' ಎಂದ್ದಿದಳು.

``ನೀವ್ಯಾರು? ಗೊತ್ತಾಗಲ್ಲಿಲ''
``ನಾನು ಅವರ ಹೆಂಡತಿ''
``ಸ್ವಲ್ಪ ಅವರಿಗೆ ಫೋನ್ ಕೊಡ್ತೀರಾ?''
ಅದಕ್ಕೆ ದೇವಿ ``ಈಗ ಅವರಿಗೆ ಕೊಡಲಿಕ್ಕಾಗುವುದ್ಲಿಲ. ಈಗವರು ಮನೆಯ ಬಟ್ಟೆಗಳನ್ನು ತೊಳೆಯುತ್ತ್ದಿದಾರೆ'' ಅಂದು ಆ ಕರೆಯನ್ನು ಕತ್ತರಿಸ್ದಿದಳು. ಇಂಥ್ದದರ್‍ಲೆಲ ಅವಳು ಒಳ್ಳೆಯ ಆಟಗಾರ್ತಿ. ಆಗ ಮಂಕಾಳಜ್ಜಿ ``ಏ, ಹುಡುಗಿ ಹಂಗ್ಲೆಲ ಬೇರೆಯವರಿಗೆ ತ್ರಾಸು ಕುಡೂಕಾಗ. ಬಾ ಇಲೆ ಕಣ್ಣ್ಲೆಲ ಮಂಜ ಮಂಜ ಆತೀದ. ಸ್ವಲ್ಪ ನೆತ್ತಿ ಮೇಲೆ ಎಣ್ಣೆ ಹಾಕು'' ಎಂದು ಬೈದಂತೆ ಮಾಡುತ್ತ್ದಿದಳು.


* * *

ಮನೆಯವರ್‍ಲೆಲ ತಮ್ಮ ಕೆಲಸಗಳಿಗೆಂದು ಹೋದ ಮೇಲೆ ದೇವಿಯ ಮನೆ ಕೆಲಸಗಳು ತುಸು ಹೊತ್ತಿನ್ಲಲೇ ಮುಗಿದುಬಿಡುತ್ತ್ದಿದವು. ಮಂಕಾಳಜ್ಜಿಗೆ ದೇವಿಯೊಂದಿಗೆ ಮಾತು ಬೇಕು. ದೇವಿಗೆ ಒಂದೊಂದು ಸಲ ಅಜ್ಜಿಯೊಂದಿಗಿನ ಮಾತೂ ಮನೆ ಕೆಲಸದಂತೆ ಅನಿಸಿಬಿಡುತ್ತಿತ್ತು. ಅವಳೊಂದಿಗಿನ ಮಾತು ತುದಿಯನ್ನೇ ಮುಟ್ಟುತ್ತಿರಲ್ಲಿಲ. ತಾವು ಸಣ್ಣವರಿರುವಾಗಿನ ಕಾಲ ಹೇಗಿತ್ತು, ಮದುವೆಯಾದಾಗ ಹೇಗಿತ್ತು, ಮಗ ಮಗಳು ಹುಟ್ಟ್ದಿದು- ಈ ಮಂಕಾಳಜ್ಜಿಯ ಆತ್ಮಕತೆಯ ನಿರೂಪಣೆಯ ಬಗ್ಗೆ ದೇವಿಗೆ ಆಸಕ್ತಿ ಇರಲ್ಲಿಲ. ಅಜ್ಜಿಯ ಮಾತಿಗೆ `ಹಾಂ, ಹೂಂ' ಅನ್ನುತ್ತ, ಮೊಬೈಲ್ಲ್‌ಲಿ ಯಾವುದಾದರೂ ಕರೆ ಬರಬಹುದೆ ಎಂದು ನಿರೀಕ್ಷಿಸುತ್ತ, ಕಿಟಕಿಯಿಂದ ರಸ್ತೆಯ್ಲಲಿ ಹೋಗುವ ಜನರನ್ನು ನೋಡುತ್ತಿರುತ್ತ್ದಿದಳು ದೇವಿ.

ಏನ್ದಿದರೂ ಊರಿನ ವಿಷಯಗಳ ಬಗ್ಗೆ ಮಾತನಾಡಲು ದೇವಿಗಿರುವುದು ಅಜ್ಜಿಯೊಬ್ಬಳೆ. ಅವಳ ಸ್ವಮಾತುಗಳು ಮುಗಿದ ಮೇಲೆ ಹಗೂರವಾಗಿ ತಮ್ಮ ಮನೆಯ, ಊರಿನ ಬಗ್ಗೆ ಮಾತು ತೆಗೆಯುತ್ತ್ದಿದಳು. ಇದೇ ಇದೇ ಅಜ್ಜಿ ಹಿತ್ತಲಿನ್ಲಲಿರುವ ತೆಂಗಿನ ಕಾಯಿಗಳನ್ನು ಹೆಕ್ಕಿಕೊಡುತ್ತ್ದಿದುದಕ್ಕೆ ದೇವಿಗೆ ಒಂದು ತೆಂಗಿನ ಕಾಯಯನ್ನು ಕೊಟ್ಟು ಕಳಿಸುತ್ತ್ದಿದಳು. ಅದನ್ನು ದೇವಿ ಶೆಟ್ಟರ ಅಂಗಡಿಗೆ ಮಾರಿ ಭಜ್ಜಿ ತಿನ್ನುತ್ತ್ದಿದಳು. ಈಗ ಅದನ್ನು ನೆನಪು ಮಾಡಿದಾಗ `ಆಗ ನಮ್ಮ ಕೈಯ್ಲಲಿ ದುಡ್ಡೇ ಇರೂದ್ಲಿಲಾಗಿತ್ತು, ನೋಡು' ಅನ್ನುತ್ತ್ದಿದಳು.

ಅಜ್ಜಿಗೆ ದೇವಿಯ ಅಪ್ಪ ಪರಮೇಶ್ವರನ ಬಗ್ಗೆ ಬಹಳ ಅಭಿಮಾನ. ಅವನು ಊರ್‍ಲಲಿ ಹೇಗೆ ಒಬ್ಬ ಮರ್‍ಯಾದಸ್ತನಾಗ್ದಿದ, ನಾಲ್ಕು ಊರ್‍ಲಲಿ ಅವನ ಮಾತಿಗೆ ಕಿಮ್ಮತ್ತು ಹೇಗಿತ್ತು ಎಂಬುದನ್ನು ಅಜ್ಜಿ ಹೇಳುತ್ತ್ದಿದರೆ ದೇವಿ ಬಿಟ್ಟ ಬಾಯಿ ಮುಚ್ಚದೆ ಕೇಳುವಳು. ಅಪ್ಪ ಬೆಟ್ಟಕ್ಕೆ ಸೌದೆ ಕಡಿಯಲೆಂದು ಹೋದವನು ಹುಲಿ ಬಾಯಿಗೆ ಸಿಕ್ಕ್ದಿದನ್ನು ಕೇಳಿ ತಡೆಯಲಾಗದೆ ಎರಡು ಹನಿ ಅವಳ ಕಣ್ಣಿಂದ ಉದುರುವುದೂ ಇತ್ತು. ದೇವಿಯ ಕಣ್ಣ ಮುಂದೆ ಬರದ ಅಪ್ಪ ಮಂಕಾಳಜ್ಜಿಯ ಮಾತ್ಲಲಿ ಜೀವ ತಳೆಯುತ್ತ್ದಿದ.

ಅಜ್ಜಿಯ ಕೆಲಸಗಳ ಮೇಲೆ ಒಂದು ಕಣ್ಣಿಡಬೇಕೆಂದು ಯಾರೂ ಹೇಳದ್ದಿದರೂ ಮನೆಗೆ ಬಂದ ಮೇಲೆ ಯಜಮಾನತಿಯ ವಿಚಾರಣೆಗಳು ಹಾಗೇ ಇರುತ್ತ್ದಿದವು. ಆಗ್ಲೆಲ ದೇವಿ ಯಾವ ಗುಟ್ಟನ್ನು ಅಜ್ಜಿಯ ಕುರಿತಂತೆ ಬಿಟ್ಟುಕೊಡುತ್ತಿರಲ್ಲಿಲ. ಮತ್ತು ಅಜ್ಜಿ ಕೇಳಿದಳೆಂದು ಮಗಳೊಂದಿಗೆ ಮಾತನಾಡಲು ಮನೆ ಎದುರಿಗಿನ ಫೋನಿನ ಬೂತಿಗೆ ಕೈ ಹಿಡಿದು ಕರೆದುಕೊಂಡು ಹೋಗುತ್ತ್ದಿದಳು. ಅಜ್ಜಿ ಮಗಳೊಂದಿಗೆ ಮಾತಾಡುತ್ತ `ನನ್ನನ್ನು ಊರಿಗಾದರೂ ಕರೆದುಕೊಂಡು ಹೋಗಿಬಿಟ್ಟು ಬಿಡು' ಎಂಬ ಮೊರೆ ದೇವಿಯನ್ನು ಬಹಳ ದಿನ ತಡೆ ತಡೆದು ಕಾಡುತ್ತಿತ್ತು. ಆ ದಿನವೇ ದೇವಿ ಅಜ್ಜಿಯೊಂದಿಗೆ ಮಳ್ಳು ಮಳ್ಳಾಗಿ ``ಅಜ್ಜೀ ನಾವಿಬ್ಬರೂ ನಮ್ಮೂರಿಗೆ ಬಸ್ಸು ಹತ್ತಿ ಯಾರಿಗೂ ತಿಳಿಯದ ಹಾಗೆ ಹೋಗಿಬಿಡುವಾ?'' ಎಂದು ಕೇಳಿ ಅಜ್ಜಿಯನ್ನು ನಗಿಸ್ದಿದಳು.
``ದೇವಿ ನಿಮ್ಮ ಅಕ್ಕ ಹಾಗೆ ಬೇರೆ ಯಾವನದೋ ಸಂಗತಿಗೆ ಓಡಿ ಹೋಗೋದು ಬೇಡಾಗಿತ್ತು. ಮರ್‍ಯಾದೆಯಿಂದ ಮದುವೆಯಾಗಿ ಊರ್‍ಲಲೇ ಇರಬೇಕಿತ್ತು. ಅದೇ ಘನತನ ತರುವಂಥ್ದದು'' ಎಂದು ಇದಕ್ಕ್ದಿದಂತೆ ಮೊದಲ ಸಲ ದೇವಿಯ ಅಕ್ಕನ ಬಗ್ಗೆ ಮಾತನಾಡ್ದಿದಳು. ಇದೇ ಅಕ್ಕನ ಬಗ್ಗೆ ತಿಳಿಯಲು ಸರಿಯಾದ ಹೊತ್ತೆಂದು ದೇವಿ ಎಷ್ಟು ಕೇಳಿದರೂ ಅಜ್ಜಿಗೆ ಮಾತಾಡುವ ಉಮೇದು ಇರಲ್ಲಿಲ.

``ಅದ್ಲೆಲ ಆದ ಕತೆ. ಮುಂದಿನ ಕತೆ ಏನಾದರೂ ಇದರೆ ಹೇಳು''ಎಂದು ಎದು ಹೋಗ್ದಿದಳು ಅಜ್ಜಿ.
ಅಕ್ಕ ಓಡಿ ಹೋದಾಗ ಅದನ್ನು ಅರಿಯುವ ವಯಸ್ಸಾಗಿರಲ್ಲಿಲ ದೇವಿಗೆ. ಅವಳು ಬಹಳ ಚಂದವಾಗಿ ಸೀರೆ ಉಡುತ್ತ್ದಿದಳು. ಸೀರೆಯನ್ನು ಹ್ಲಲ್ಲಲಿ ಕಚ್ಚಿ ಹಿಡಿದು ಹೊಕ್ಕಳ ತುಸು ಕೆಳಗೆ ಉಡುತ್ತ್ದಿದುದು ದೇವಿಗೆ ನೆನಪಿದೆ. ಪೌಡರಿನ ವಾಸನೆಯೊಂದಿಗೆ ಅವಳು ಘಮಘಮಿಸುತ್ತ, ಅಂಗಳದ್ಲಲಿ ಬಾಳೇ ಗಿಡದ ಮೇಲೆ ನಿನ್ನೆ ಕಟ್ಟಿಟ್ಟ ಅಬ್ಬಲಿಗೆ ಮಾಲೆ ಮುಡಿದು ತನ್ನನ್ನೂ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತ್ದಿದಳು. ಅವಳ ಕೈಹಿಡಿದು ನಡೆಯುತ್ತ್ದಿದರೆ ಮಾಯಾ ಕಿನ್ನರಿಯೊಂದಿಗೆ ಗಾಳಿಯ್ಲಲಿ ತೇಲಿದಂತಾಗುತ್ತಿತ್ತು. ಬಹಳ ಜನರಿಗ್ಲಿಲದ ಅವಳ ಚಂದವೇ ಅವಳು ಓಡಿ ಹೋಗಲು ಕಾರಣವಾಯ್ತೆ ಎಂದು ದೇವಿ ತನ್ನ್ಲಲಿ ಅನೇಕ ಸಾರಿ ಕೇಳಿಕೊಳ್ಳುತ್ತ್ದಿದಳು. `ತಾನೇನಾದರೂ ಅವಳನ್ನು ಅರಸಿಕೊಂಡು ಇಲಿಗೆ ಬಂದನೆ' ಎಂಬ ವಿಚಾರವನ್ನು ತನ್ನ್ಲಲೆ ಆಗಾಗ ಅವಳು ಕೇಳಿಕೊಳ್ಳುವುದಿತ್ತು.


* * *

ಹಗಲು ಕಪ್ಪಾಗುತ್ತ್ದಿದಂತೆ ದೇವಿಗೆ ಬರುವ ಕರೆಗಳು `ರಾತ್ರಿ ತಡವಾಗಿ ಬರುತ್ತೇವೆ- ಊಟವನ್ನು ಟೇಬಲ್ ಮೇಲೆ ಇಟ್ಟು ಮಲಗಿ' ಎಂದು ಮಾಸ್ತರ ಅಥವಾ ಅಮ್ಮನವರದಾಗಿರುತ್ತಿತ್ತು. ತಡವಾಗಿ ಬರಲಿರುವ ಅವರನ್ನು ಕಾಯದೆ ಅಜ್ಜಿ ಮತ್ತು ದೇವಿ ಆರಾಮಾಗಿ ಟಿ.ವಿ. ನೋಡುತ್ತ ಊಟ ಮಾಡುತ್ತ್ದಿದರು. ಇಬ್ಬರಿಗೂ ಅನಂತನಾಗ್ ನಟಿಸಿದ ಸಿನಿಮಾಗಳನ್ನು ನೋಡುವುದರ್‍ಲಲಿ ಯಾವುದೇ ತಕರಾರಿರಲ್ಲಿಲ. ಅನಂತನಾಗ್ ಯಾವುದೇ ಸುಂದರಿಯನ್ನು ಪ್ರೀತಿ ಮಾಡುವುದು ದೇವಿಗೆ ಬಹಳ ಸೇರುತ್ತಿತ್ತು. ಪ್ರೀತಿ ಮಾಡಿದರೆ ಅವನ ಹಾಗೆ ಮಾಡಬೇಕು ಎಂದು ಅವಳು ಅಂದುಕೊಳ್ಳುತ್ತ್ದಿದಳು.

ಮಂಕಾಳಜ್ಜಿ ``ಅವನು ನಮ್ಮ ಕಡೆಯವನೇ ಹೊನ್ನಾವರದವನು. ಪಾರ್ಟು ಚಲೋ ಮಾಡ್ತ'' ಎಂದು ದೇವಿಗೆ ಹೇಳಿದಾಗಿನಿಂದ ಅನಂತನಾಗ್ ದೇವಿಗೆ ಇನ್ನಷ್ಟು ಹತ್ತಿರದವನಾಗ್ದಿದ. ದೇವಿ ಅಕ್ಕನೊಂದಿಗೆ ಅವನ ಸಿನಿಮಾ ನೋಡ್ದಿದ್ಲಲದೆ, ಆಗೀಗ ಪೇಟೆಯ್ಲಲಿ ತಾಗುವ ಅವನ ಬಹಳಷ್ಟೂ ಸಿನಿಮಾಗಳನ್ನು ನೋಡ್ದಿದಳು. ಅಕ್ಕನೊಂದಿಗೆ ಸಿನಿಮಾ ನೋಡುವಾಗಲ್ಲೆಲ. ಅನಂತನಾಗನದೇ ಕ್ರಾಪ್ ಬಿಟ್ಟ ಹುಡುಗನೊಬ್ಬ ಅಕ್ಕನ ಹೆಗಲ ಮೇಲೆ ಕೈಹಾಕಿ ನಗುತ್ತ ಕೂತಿರುತ್ತ್ದಿದ. ಅಕ್ಕ ``ಬೇಡ, ಬೇಡ, ಶೀ... ಶೀ...'' ಅನ್ನುವುದು ಯಾಕೆಂದು ದೇವಿಗೆ ಆಗ ಗೊತ್ತಾಗುತ್ತಿರಲ್ಲಿಲ. ಅವನದು ಅಕ್ಕನ ಹೆಗಲ ಮೇಲೆ ಕೈಹಾಕುವಂಥ ಅದೆಂಥ ದೋಸ್ತಿಯೋ, ಬೆಳಕಾಗುತ್ತ್ದಿದಂತೆ ಬೆಳ್ಳಿ ತೆರೆಯ ಮೇಲೆ ಅನಂತನಾಗ್ ನಾಯಕಿ ಲಕ್ಷ್ಮಿಯನ್ನು ಪ್ರೀತಿಸ್ದಿದೇ ಸುಳ್ಳು ಅನ್ನುವಂತೆ ಅವನು ಮಾಯವಾಗಿರುತ್ತ್ದಿದ.

ಮೊದಲಿಂದಲೂ ಅನಂತನಾಗ್ ದೇವಿಗೆ ಅಭಿಮಾನಿ ನಟ. ``ಈ ವಯಸ್ಸಿನ್ಲಲೂ ಎಷ್ಟು ಚಂದ ಕಾಣುತ್ತಾನೆ'' ಎಂದು ಅಜ್ಜಿಯ ಹತ್ತಿರ ಹೇಳುವಷ್ಟು ಅವನ ಬಗ್ಗೆ ಮೆಚ್ಚುಗೆ. ಮೊನ್ನೆ ಮೊನ್ನೆ ಬೇಕರಿಯ್ಲಲಿ ಪರಿಚಯವಾದ ಮೇಲಿನ ಮನೆ ಹುಡುಗಿ ವಾಸಂತಿಯ ಹತ್ತಿರ ಅವನ ಫೋನ್ ನಂಬರನ್ನು ಪತ್ತೆ ಮಾಡಲು ಹೇಳಬೇಕು. ಅದು ಸಿಕ್ಕಿದರೆ ಅವನೊಂದಿಗೆ ಮಾತಾಡಬಹುದು. ಇಂಥ್ದದರ್‍ಲಲಿ ವಾಸಂತಿ ಚುರುಕು. ``ಆಕಾಶದಿಂದ ಧರೆಗಿಳದ ರಂಭೆ...'' ಎಂದು ಅನಂತ್‌ನಾಗ್ ಸಿನಿಮಾದ ಹಾಡನ್ನು ಗುಣುಗುತ್ತ ಪಾತ್ರೆ ತೊಳೆಯುತ್ತ ದೇವಿ ಅವನೊಂದಿಗೆ ಮಾತಾಡುವ ಬಗ್ಗೆ ಯೋಚಿಸುತ್ತ್ದಿದಳು.

ಒಂದು ವೇಳೆ ಅನಂತನಾಗ್ ನಂಬರು ಸಿಕ್ಕಿ, ಅವನೊಂದಿಗೆ ಏನು ಮಾತಾಡಬಹುದು. ದೇವಿ ಲಹರಿಯ್ಲಲಿ ತೇಲುತ್ತಾಳೆ. ``ನಿಮ್ಮ ಅಭಿಮಾನಿ ನಾನು'' ಎಂದರೆ ನಕ್ಕುಬಿಡಬಹುದು. ``ನಾನು ನಿಮ್ಮ ಊರ ಕಡೆಯವಳು'' ಎಂದರೂ ಅವರು ನನ್ನೊಂದಿಗೆ ಮಾತಾಡುತ್ತಾರೆಯೋ, ಇಲವೊ. ಎಂಬುದು ಒಂದು ಗಳಿಗೆ ದೇವಿಗೆ ಯೋಚನೆಯಾಯ್ತು. ಅನಂತನಾಗ್ ಜೊತೆ ಮಾತಾಡುವ, ಕನಸುಕಾಣುತ್ತ ದೇವಿ ನ್ದಿದೆ ಹೋದಳು. ``ಕಾಪಾಡು ಶಿವನೆ'' ಎನ್ನುವ ಅಜ್ಜಿಯ ಕನವರಿಕೆಯಿಂದ ಬೆಚ್ಚಿ ಕಣ್ಣು ತೆರೆದ ದೇವಿ, ನೀರ್‍ಲಲಿ ಬ್ದಿದ ನಾಯಕಿಯನ್ನು ಕಾಪಾಡಿದ ನಾಯಕನ ನೆನಪಾಗಿ- ಹಾಗೇ ಕಣ್ಣುಮುಚ್ಚಿ ಮಲಗಲು ಪ್ರಯತ್ನಿಸಿದಳು.
***
``ದೇವಿ, ನೀನು ಬೇಕಾದರೆ, ಊರಿಗೆ ಫೋನ್ ಮಾಡಿ, ನಿಮ್ಮ ಅವ್ವಿಯೊಂದಿಗೆ ಮಾತಾಡು'' ಎಂದು ಪದ್ಮಾವತಿ ಅಮ್ಮನವರು ಹೇಳ್ದಿದೇ ನೆಪವಾಗಿ, ತಮ್ಮ ಮನೆ ಹತ್ತಿರದ್ಲಲಿರುವ ರಾಯ್ಕರ ಮಾಸ್ತರರ ಮನೆಗೆ ಫೋನ್ ಮಾಡ್ದಿದಳು. ಇವಳ ಫೋನ್ ಕರೆಗೆ ಗಾಬರಿಯಿಂದ ಕರೆಗೆ ಓಡಿ ಬಂದ ಅವ್ವ ಸಾವಿತ್ರಿಗೆ ``ನಂದೇ ಫೋನ್‌ನ್ಲಲಿ ಮಾತಾಡ್ತೆ'' ಎಂದು ಧಿಮಾಕಿನ್ಲಲಿ ಹೇಳಿದಳು. ದೇವಿಗೆ ಅವಳವ್ವ ``ನೀನು ಇಂಥ್ದದಕ್ಕ್ಲೆಲ ದುಡ್ಡು ಖರ್ಚು ಮಾಡಬೇಡ. ಮುಂದೆ ಬೇಕಾಗುತ್ತದೆ'' ಎಂದು ಆ ಕಡೆಯ ಸಂಪರ್ಕ ಕಡಿದ್ದಿದಳು. ಆಗ ದೇವಿಯ ಮನಸ್ಸಿಗೆ ಬೇಜಾರು ಅನ್ನಿಸಿಬಿಟ್ಟಿತು. ``ಈ ಹಡಬೆ ರಂಡೆಯೊಂದಿಗೆ ಮಾತೇ ಆಡಬಾರದು'' ಎಂದು ತನಗೆ ತಾನೇ ನಿಕ್ಕಿ ಮಾಡಿಕೊಂಡಳು. ಮರುಕ್ಷಣ ಅವ್ವನ ಬಗ್ಗೆ ಪಾಪ ಅನ್ನಿಸಿತು. ಊರ್‍ಲೆಲ ಅಲೆದು ಕೋಳಿಗಳನ್ನ ತಕ್ಕೊಂಡು ಅವನ್ನು ಪೇಟೆಯ್ಲಲಿ ಮಾರುತ್ತಾಳೆ. ಹಗಲಿನ ಉರಿಬಿಸಿಲು ನೆತ್ತಿಯನ್ನು ಸೀಳುತ್ತ್ದಿದರೂ, ಕೋಳಿಗಳನ್ನು ದರ ಬಿಡದೆ ಮಾರಿಯೇ ನಾಲ್ಕು ಕಾಸು ಮಾಡಿಕೊಂಡು, ಪಳದಿಗೆಂದು ಮೀನು ಹಿಡಿದೇ ಮನೆಗೆ ಬರುತ್ತಾಳೆ. ಅವಳು ಹೇಳುವುದರ್‍ಲಲಿ ತಪ್ಪ್ಲಿಲ. ಆದರೆ ಇದು ನಾನು ದುಡ್ಡುಕೊಟ್ಟು ತಕ್ಕೊಂಡ್ದದ್ಲಲ ಎಂದು ಅವ್ವನಿಗೆ ಹೇಳಿದರೂ ಅವಳು ಕೇಳುತ್ತಾಳೆ ಎಂಬುದರ್‍ಲಲಿ ದೇವಿಗೆ ನಂಬಿಕೆ ಇರಲ್ಲಿಲ.

ಮೊದಲ್ಲೆಲ ಯಾರ್‍ಲೆಲ ಫೋನ್ ಕರೆಗಳು ಬಂದವು. ಯಾರಿಗೆ ಫೋನ್ ಮಾಡ್ದಿದಾರೆ ಎಂಬ ಮೊಬೈಲ್ ತಪಾಸಣೆ ಈಗೀಗ ಪದ್ಮಾವತಿ ಅಮ್ಮನಿಂದ ಕಮ್ಮಿಯಾಗಿತ್ತು. ಹಾಗಾಗಿ ದೇವಿ ರತ್ನ ಅಕ್ಕೋರಿಗೆ ಆಗೀಗ ಫೋನ್ ಮಾಡಿ ತನ್ನ ಅವ್ವಿಯ ಬಗ್ಗೆ ವಿಚಾರಿಸುತ್ತ್ದಿದಳು. ``ಕೋಳಿ ವ್ಯಾಪಾರಕ್ಕೆ ಹೆಚ್ಚು ಹೋಗದಿರುವಂತೆ, ಅವಳಿಗೆ ದುಡ್ಡೇನಾದರೂ ಬೇಕಾದರೆ ಕೊಡುವಂತೆ'' ರತ್ನ ಅಕ್ಕೋರನ್ನು ದೇವಿ ಕೇಳಿಕೊಳ್ಳುತ್ತ್ದಿದಳು.

ಒಮ್ಮೊಮ್ಮೆ ಅವಳ ಮೊಬೈಲ್‌ಗೆ ಯಾವ ಕರೆಗಳು ಇಡೀ ದಿನ ಕಾದರೂ ಬರುತ್ತಿರಲ್ಲಿಲ. ತನ್ನೊಂದಿಗೆ ಮಾತನಾಡುವುದಕ್ಕೆಂದೇ ಹುಡುಗನದೊ, ಗಂಡಸಿನದೊ ಕರೆ- ಅದೂ ಬರುತ್ತಿರಲ್ಲಿಲ. ಅದು ಕೂಡ ಹಾದಿ ತಪ್ಪಿ ಬಂದ ನಿಧಾನವಾಗಿ ಪರಿಚಯ ಬೆಳೆದ ಕರೆ. ಎಷ್ಟು ಒತ್ತಾಯ ಮಾಡಿದರೂ ತನ್ನ ಹೆಸರು, ವಿಳಾಸವನ್ನು ಹೇಳದೆ- ಸಣ್ಣದನಿಯ್ಲಲಿ ಕೊಮಣೆ ಮಾಡುತ್ತ್ದಿದಳು ದೇವಿ. ಇಂಥ ಮಾತುಕತೆಗಳು, ಪರಿಚಯ, ಗುರುತು, ಹೆಸರು, ವಿಳಾಸವ್ಲಿಲದೆ ನಡೆಯುತ್ತವ್ಲಲ ಎಂದು ಅವಳಿಗೆ ಸೋಜಿಗ.
***
ರಸ್ತೆಯ್ಲಲಿ ಹಾಯುವ ಇಡೀ ಬಸ್ಸುಗಳನ್ನೇ ಪ್ರತಿಫಲಿಸುವ, ಮೈಪೂರ್ತಿ ಕನ್ನಡಿಗಳಿರುವ ಇಮಾರುತುಗಳ ನೆರಳನ್ನು ದಾಟಿ ಅವ್ವನಿಗೆ ಸೀರೆ ತಕ್ಕೊಳ್ಳಲೆಂದು ಹೋಗಿ ಬಂದ ದಿನದಿಂದ ದೇವಿಗೆ ತಳಮಳ ಶುರುವಾಗಿತ್ತು. ಅದ್ಲೆಲೊ ಸೀರೆ ಅಂಗಡಿಯ ಮುಂದೆ ಸಿಕ್ಕ ದೇವಿಯ ಊರಿನ ಗೌರಿ ಅವಳಾಗಿಯೇ ಗುರುತು ಹಿಡಿದು ಮಾತಾಡಿಸಿ ``ಏ, ನೀನೂ ಇಲೇ ಇದ್ಯೇನೆ?'' ಯಾರ ಮನೆಯ್ಲಲಿ ಕೆಲಸ ಮಾಡ್ತಿಯೆ?'' ನಾನು ಶಾಂತ ಅಕ್ಕೋರ ಮಗಳ ಮನೇಲಿ ಕೆಲಸ ಮಾಡ್ತೆ'' ಎಂದು ಗಡಿಬಿಡಿಯ್ಲಲೇ ಅವಳ ಬಗ್ಗೆ ಹೇಳಿ, ಇವಳು ಯಾರ ಮನೆಯ್ಲಲಿ ಕೆಲಸ ಮಾಡುತ್ತಾಳೆಂಬುದನ್ನು ಕೇಳಿ ತಿಳಿದುಕೊಂಡ್ದಿದಳು. ಸೀರೆ ತಕ್ಕೊಳಲು ಅವಳೇ ದೇವಿಗೆ ಸಹಾಯ ಮಾಡಿ, ಮಾತಿನ ನಡುವೆ ದೇವಿಯ ಅಕ್ಕ ನೀಲಾ ಇದೇ ಊರಿನ್ಲಲಿ ಇರುವಳೆಂದೂ, ಗೌರಿ ಸಿನಿಮಾ ನೋಡಲು ಹೋದಾಗ ಅವಳೇ ಸಿಕ್ಕು ಮಾಡನಾಡಿಸಿದಳಂತೆ. `ಫೋನ್ ಮಾಡು' ಎಂದು ನಂಬರನ್ನೂ ಕೊಟ್ಟಳಂತೆ. `ಅವಳು ಎಲ್ದಿದಾಳೆ, ನೀನು ಅವಳನ್ನು ಮತ್ತೆ ಮಾತಾಡಿಸಿದ್ಯೇನೆ, ಅವಳೊಂದಿಗೆ ಯಾರ್‍ದಿದರು' ಎಂಬ್ಲೆಲ ದೇವಿಯ ಪ್ರಶ್ನೆಗೆ ಗೌರಿ `ಗೊತ್ತ್ಲಿಲ' ಎಂದ್ದಿದಳು.
``ನಿನಗೆ ಆ ನಂಬರು ಕೊಡ್ತೆ. ಮನೆಯ್ಲಲಿ ಎಲೋ ಇಟ್ಟ್ದಿದೆ. ಸಿಕ್ಕ ಕೂಡಲೇ ನಿಂಗೆ ಹೇಳ್ತೆ'' ಎಂದು ಗೌರಿ ದೇವಿಯ ಬಾಡಿದ ಮುಖವನ್ನು ನೋಡಿ ಅವಳ ಕೈ ಹಿಡಿದು ``ಮ್ದುದಾಂ ಹುಡುಕಿ ಹೇಳ್ತೆ'' ಎಂದು ಎರಡೆರಡು ಸಲ ಹೇಳಿ ಇವಳನ್ನು ಬಸ್ಸು ಹತ್ತಿಸ್ದಿದಳು.

ಮನೆಯ್ಲಲಿ ದೇವಿಯ ಮುಖ ಸಣ್ಣದಾಗಿರುವುದನ್ನ ನೋಡಿದ ಮಂಕಾಳಜ್ಜಿ. ``ಏನೇ, ಎಂಥ್ದದಕ್ಕೆ ಬೇಜಾರೆ? ಹಂಗ್ಲೆಲ ಮನಸ್ಸಿಗೆ ಬೇಜಾರು ಮಾಡಕಣುಕಾಗ'' ಎಂದಳು.

``ಅಕ್ಕ ಇದೇ ಊರ್‍ಲಲಿ ಇದಾಳೆ ಅಜ್ಜಿ''. ಮ್ಲೆಲಗೆ ಎಂದ ದೇವಿಗೆ ``ಜೀವನ ಎಲಿಂದ, ಎಲಿಗೋ ಕೂಡಸ್ತಿದ ನೋಡ್. ಪೂರಾ ಹರಿದು ಹೋಯ್ತಂದೆ ಬಿಟ್ಟ್ದದೂ, ಅದೃಷ್ಟ ಇದ್ರೆ ಮತ್ತೆ ಕೂಡಬಹುದು. ನಿಮ್ಮ ಅಕ್ಕನದೂ ನಿಂದೂ ಆದ ಹಂಗೆ. ವಿಚಾರ ಮಾಡಬೇಡ. ನಿಂಗೆ ಅಕ್ಕಸಿಕ್ಕುವ ಅದೃಷ್ಟ ಇದ್ರೆ ಸಿಕ್ಕೇ ಸಿಕ್ಕುತ್ತಾಳೆ... ಇಬ್ಬರಿಗೂ ನಸೀಬು ಬೇಕು. ಏನು ಹೇಳು ನಸೀಬು ಅನ್ನುವುದು ಒಂದು ಜೀವನಕ್ಕೆ ಬೇಕು'' ಅಂದು ಸಮಾಧಾನದ ನಾಲ್ಕು ಮಾತಾಡ್ದಿದಳು.
***
ವೆಂಕಟ್ರಮಣ ದೇವರ ಬಂಡೀಹಬ್ಬ ದಿನ ನಿನ್ನ ಹಣೆಯ ನಡುವೆ ಹಾಕಿಸಿದ ಹಸಿರು ಹಚ್ಚೆ ಹಾಗೆಯೇ ಇದೆಯೇ... ಅಳಿಸಲಾಗದ ಚುಕ್ಕಿಯೊಂದನ್ನು ನಿನ್ನ ಹಣೆಗೆ ಇಟ್ಟಂತೆ...

ಕಿವಿಗೆ ಅವ್ವ ನಿನಗೆ ಮಾಡಿಸಿಕೊಟ್ಟ ದೊಡ್ಡ ರಿಂಗು, ಕೈಯ ಬಳೆ ಹಾಗೆಯೇ ಇದೆಯೆ... ಏನ್ಲೆಲ ಕೇಳಬೇಕಿದೆ ನಿನಗೆ. ನೀನು ಬೆಳೆಸಿದ ದಾಸಾಳ, ರಂಜಕದ ಹೂವಿನಗಿಡಗಳು ಮನೆಯ ಹಿತ್ತಲ್ಲಲಿ ಬೆಳೆದು ನಿಂತಿವೆ. ಗೋಡೆಯ್ಲಲಿ ನೀನು ಬರೆದ ನವಿಲು, ಗಿಳಿ, ಗುಬ್ಬಿಗಳ ಕೆಂಪು ಹಸೆ ಕಳೆದ ವರ್ಷ ಮನೆಗೆ ಗಿಲಾಯಿ ಮಾಡುವಾಗ ಅಳಸಿ ಹೋದವು... ನಾವಿಬ್ಬರೂ ಜೋರು ಮಳೆಯ್ಲಲಿ ಸೂಡಿಕೊಂಡ ಕೊಡೆಯನ್ನು ಜೋರು ಗಾಳಿಗೆ ಹಾರಿಹೋಗದಂತೆ ಸಂಭಾಳಿಸಿ ಹಿಡಿದುಕೊಳ್ಳುತ್ತ ದೇವಳದ ಗ್ದದೆಗೆ ಅವ್ವನಿಗೆಂದು ಗಂಜಿ ತಕ್ಕೊಂಡು ಹೋದ್ದದು ಈಗಲೂ ನಿನಗೆ ನೆನಪಿದೆಯೆ...

ನೀನೀಗ ಏನು ಮಾಡುತ್ತೀ? ಇಷ್ಟು ವರ್ಷ ನಮ್ಮ ನೆನಪು ಬರಲ್ಲಿಲವೆ? ನೀನು ಓಡಿ ಹೋಗುವ ಮೊದಲ ದಿನ ಅನಂತನಾಗನ ಸಿನಿಮಾ ನೋಡಿ ಬಂದೆವ್ಲಲ, ಆ ರಾತ್ರಿ ಅವ್ವ ನಿನಗೇಕೆ ಬಯ್ದಳು? ಕೇಳಬೇಕೆಂದು ಕೊಂಡರೆ ನೀನೇ ಇರಲ್ಲಿಲ...
``ನಾನು, ನಿನ್ನ ತಂಗಿ ದೇವಿ, ಊರು ಇಂಥ್ದದು, ಅವ್ವನ ಹೆಸರು ಸಾವಿತ್ರಿ.... ಅಪ್ಪ ಪರಮೇಶ್ವರ -ಅವರಿಬ್ಬರೂ ನನ್ನಂತೆಯೇ ನಿನಗೂ ತಂದೆ ತಾಯಿಯರು'' ಎಂದು ಅಕ್ಕನಿಗೆ ಹೇಳಬೇಕೆಂದುಕೊಳ್ಳುವುದನ್ನು ತನಗೆ ತಾನು ಹೇಳಿಕೊಳ್ಳುತ್ತ ದೇವಿ, ಗೌರಿ ಕೊಟ್ಟ ಅಕ್ಕನ ಸಂಖ್ಯೆಗಳಿಗೆ ಪ್ರಯತ್ನಿಸುತ್ತ್ದಿದಳು. ಹಾಗೆ ಪ್ರಯತ್ನಿಸಿದಾಗಲ್ಲೆಲ ``ನೀವು ಡಯಲ್ ಮಾಡಿದ ಸಂಖ್ಯೆ ಸರಿ ಇದೆಯೇ ಎಂದು ಪರೀಕ್ಷಿಸಿ'' ಎಂದು ಮತ್ತೆ ಮತ್ತೆ ಬರುತ್ತಿತ್ತು.

ದೇವಿ ಪ್ರಯತ್ನ ಬಿಡದೆ ``ಒಂಬತ್ತು, ಎಂಟು, ಎಂಟು....'' ಎಂದು ಪ್ರಯತ್ನಿಸುತ್ತಲೇ ಇದಳು- ಅಗೋಚರ zs ನಿಯೊಂದನ್ನು ಹಿಡಿಯುವ ತವಕದ್ಲಲಿ. ಸಂಜೆಯ ಮಬ್ಬುಗತ್ತಲ್ಲಲಿ ದೇವಿಯ ಕಣ್ಣುಗಳ್ಲಲಿ ಸಂಖ್ಯೆಗಳಷ್ಟೆ ಶಾಶ್ವತ ಬಿಂಬಗಳಾಗಿ ಹೊಳೆಯುತ್ತ್ದಿದವು.

Thursday, June 21, 2007

ಬೊಂಬೆಗೊಂದು ಸೀರೆ





ಜನ ಆ ರಸ್ತೆಯ ಯಾವ ಭಾಗದಿಂದ ಹಾದು ಬಂದರೂ ದೊಡ್ಡದಾದ ಬಟ್ಟೆ ಅಂಗಡಿ `ಸುಮಂಗಲಿ ಟೆಕ್ಸ್‌ಟೈಲ್ಸ್' ಒಂದು ಚಣ ಜನರ ಕಣ್ಣಿನ್ಲಲಿ ಬೀಳದೇ ಹೋಗುವುದ್ಲಿಲ. ಆ ಭಾಗಕ್ಕೆ ತುಸು ದೊಡ್ಡದಾದ ಬಟ್ಟೆ ಅಂಗಡಿಯೆಂದರೆ ಅದು ಮಾತ್ರ. ಅಂಗಡಿಯ ಕೆಲಸದ ಹುಡುಗ ಶರಣ್ ಬೆಳಿಗ್ಗೆಯೇ ಬಂದು ತನ್ನ ಕೆಲಸ ಶುರು ಮಾಡಿಬಿಡುತ್ತ್ದಿದ. ಅವನು ಬಂದೊಡನೆ ಮಾಡುತ್ತ್ದಿದ ಕೆಲಸವೆಂದರೆ ಅಂಗಡಿಯ ಒಳ-ಹೊರಗೆ ಸ್ವಚ್ಛವಾಗಿ ಗುಡಿಸಿ ನೀರು ಹಾಕುವುದು. ಅಂಗಡಿಯ ಬಾಗಿಲ ಮುಂದೆ ತೂಗುಹಾಕಿದ ಹೂವಿನ ಪೊಟ್ಟಣವನ್ನು ಒಳಗೆ ಗ್ಲಲೆಯ ಮೇಲೆ ಎತ್ತಿಟ್ಟು, ಬಣ್ಣದ ಹೊಚ್ಚ ಹೊಸ ಸೀರೆಗಳನ್ನು ಉಟ್ಟು ನಿಂತ ಬೊಂಬೆಗಳಿಗೆ ಒಂದು ಸಲ `ಹಲೋ' ಹೇಳಿ ಅವುಗಳ ಪರವಾಗಿ ತಾನೇ ಮಾತಾಡಿ ಮುಂದಿನ ಕೆಲಸಕ್ಕೆ ಅನುವಾಗುತ್ತ್ದಿದ.
ಸೀರೆ ಉಟ್ಟ ಬೊಂಬೆಗಳ ಬಟ್ಟೆ ಸರಿ ಇದೆಯೋ, ಇಲವೆ ಎಂದು ನೋಡಿ, ಯಾವುದಾದರೂ ಹೊಸ ಮಾದರಿಯ ಸೀರೆ ಬಂದ್ದಿದರೆ ಉಡಿಸಿ, ಅಂಗಡಿಯ ಆಚೆ ಇರುವ ಹೋಟೆಲಿನ್ಲಲಿ ಒಂದು ಸಿಂಗಲ್ ಚಾ ಕುಡಿಯಲು ಹೋಗುತ್ತ್ದಿದ. ಎರಡು ಗುಟುಕು ಬಿಸಿ ಚಾ ಅವನ ಹೊಟ್ಟೆಗೆ ಹೋಯಿತೆಂದರೆ ಇನ್ನೆರಡು ತಾಸಿನ ಮಟ್ಟಿಗೆ ಹುರುಪುಗೊಳ್ಳುತ್ತ್ದಿದ. ಅವನು ಚಾ ಕುಡಿದು ಬರುವಷ್ಟರ್‍ಲಲಿ ಅಂಗಡಿಯ ಮಾಲಿಕ ಪ್ರಭಾಕರ ಬಂದು ಗ್ಲಲೆಯ ಮೇಲಿರುವ ಲಕ್ಷ್ಮಿ, ಕಾತ್ಯಾಯಿನಿ, ಆರ್ಯಾದುರ್ಗಾ ಇತ್ಯಾದಿ ದೇವಿಯರಿಗೆ ಹೂ ಮುಡಿಸಿ ಸಣ್ಣ ಪೂಜೆ ಮುಗಿದಿರುತ್ತಿತ್ತು. ಅಗರಬತ್ತಿಯ ಗಂಧದಿಂದ, ಮುಖದ ಮೇಲೆ ಆಡುತ್ತ್ದಿದ ಬಿಳಿ ಸುರಳಿ ಹೊಗೆಯಿಂದ ಪಟದ ದೇವರುಗಳು ಪ್ರಸನ್ನರಾದಂತಿರುತ್ತ್ದಿದರು.
ಶರಣ್ ಪಾರುಮನೆ ಈ `ಸುಮಂಗಲಿ ಟೆಕ್ಸ್‌ಟೈಲ್ಸ್'ನ್ಲಲಿ ಹೆಂಗಳೆಯರಿಗೆ ಸೀರೆ ಮಾರಾಟ ಮಾಡುವ ಮೊದಲು ಪುಟ್‌ಪಾತ್‌ನ್ಲಲಿ ಮಕ್ಕಳ ಆಟಿಕೆಗಳನ್ನು ಮಾರುತ್ತ್ದಿದ. ಅದಕ್ಕೂ ಮೊದಲು ಸಿನಿಮಾ ಬ್ಲಾಕ್‌ಟಿಕೆಟ್‌ಗಳನ್ನು. ಇಲಿಯವರೆಗೂ ಅವನು ಏನನ್ನಾದರೂ ಮಾರಿಯೇ ಹೊಟ್ಟೆ ಹೊರೆದುಕೊಂಡವನು. ಊರ್‍ಲಲಿ ಅವನು ರಾಯ್ಕರ್ ವಕೀಲರಿಗೆ ಹೊಡೆದು, ಪೊಲೀಸ್‌ರಿಗೆ ಹೆದರಿ ಊರು ಬಿಟ್ಟೇ ಹತ್ತಕ್ಕಿಂತ ಒಂದೆರಡು ವರ್ಷ ಹೆಚ್ಚೇ ಆಗಿತ್ತು. ಇಷ್ಟು ವರ್ಷ ಜೀವನ ನಡೆಸುವುದಕ್ಕಾಗಿ ಏನ್ಲೆಲ ಕೆಲಸ ಮಾಡಿದೆ ಎಂದು ಯೋಚಿಸುತ್ತಾ ಕೂರುವಷ್ಟು ಪುರುಸೊತ್ತು ಅವನಿಗೆ ಬದುಕ್ಲಲಿ ಎಂದೂ ಸಿಕ್ಕಿರಲ್ಲಿಲ. ಅವನ ಕೆಲಸದ್ಲಲಿನ ಚುರುಕುತನ, ಮಾತು ಅಂಗಡಿಯ್ಲಲಿ ಸೀರೆ ಮಾರುವವರೆಗೆ ತಂದು ನ್ಲಿಲಿಸಿತ್ತು.
ಅಂಗಡಿಯ್ಲಲಿ ಬೆಳಗ್ಗಿನ ಹೊತ್ತು ವ್ಯಾಪಾರ ಕಡಿಮೆಯೇ. ಜನರ ಸಣ್ಣ ಪುಟ್ಟ ಬಾರೀಕು ಖರೀದಿಗಳು ಮಾತ್ರ ಇರುತ್ತ್ದಿದವು. ಹೊತ್ತು ಏರುತ್ತ ಬಂದಂತೆ ಅದರ ವೇಗ ತುಸುವೇ ಹೆಚ್ಚಾಗುತ್ತ ನಡೆಯುತ್ತಿತ್ತು. ಮದುವೆಗಳ ಸಂದರ್ಭಗಳ್ಲಲಿ ಶರಣನಿಗೆ ಒಂದು ಸಿಂಗಲ್ ಚಾ ಕುಡಿಯುವಷ್ಟೂ ಪುರುಸೊತ್ತು ಇರುತ್ತಿರಲ್ಲಿಲ. ಬಂದವರು `ಅದನ್ನು ತೋರಿಸಿ, ಇದನ್ನು ತೋರಿಸಿ' ಎನ್ನುತ್ತ ಬಟ್ಟೆಯನ್ನು ತಮ್ಮೆದುರಿಗೆ ಗುಡ್ಡ ಮಾಡಿಕೊಳ್ಳುತ್ತ್ದಿದರು. ಈ ವ್ಯಾಪಾರದ ಹೊರತಾಗಿ ಅವನು ಕೆಲಸ ಕಡಿಮೆ ಇದ ಹೊತ್ತ್ಲಲಿ ಶೋಕೇಸಿನ್ಲಲಿ ನ್ಲಿಲಿಸಿರುವ ಬೊಂಬೆಗಳಿಗೆ ಸೀರೆ ಉಡಿಸುತ್ತ್ದಿದ, ಸೆಲ್ವಾರ್ ಕಮೀಜ್‌ಗಳನ್ನು ಹಾಕುತ್ತ್ದಿದ. ಈ ಕೆಲಸದ್ಲಲಿ ಇರುವ ಅವನ ಆಸ್ಥೆಯನ್ನು ನೋಡಿದ ಮಾಲಕ ಪ್ರಭಾಕರ ``ಈ ಕೆಲಸಗಳನ್ನು ನೀನೇ ಮಾಡಿದರೆ ಸರಿ. ಮುಂದೆ ಇದು ನಿನಗೇ ಉಪಯೋಗಕ್ಕೆ ಬರುತ್ತದೆ'' ಎಂದು ಎಲರೆದರು ಜೋಕು ಮಾಡಿ, ತನ್ನ ಮಾತಿಗೆ ತಾನೇ ನಕ್ಕು ಆ ಕೆಲಸವನ್ನು ಅವನ ಕುತ್ತಿಗೆಗೆ ನೇತು ಹಾಕ್ದಿದ.
ಗೊಂಬೆಗಳಿಗೆ ಸೀರೆ ಉಡಿಸುವ ಈ ಕೆಲಸವನ್ನು ಅವನು ಕಲಿತ್ದದು ಮೊದಲು ಕೆಲಸದ್ಲಲ್ದಿದ ಪ್ರತಿಭಾಳಿಂದ. ಈಗ ಹೆಂಗಸರೇ `ಅಬ್ಬಬ್ಬಾ' ಅನ್ನುವಷ್ಟು ಚಂದವಾಗಿ ಸೀರೆ ಉಡಿಸುವನು. ಆ ಬೊಂಬೆಗಳಿಗೆ ಅವನಿಟ್ಟ ಹೆಸರುಗಳು ಬೇರೆ ಇದವು. ಶ್ರೀದೇವಿಕಾ, ರಮ್ಯ, ಮಾಧುರಿ, ಪ್ರಿಯಾಂಕಾ ಎಂಬ ಈ ಸಿನಿಮಾ ನಾಯಕಿಯರ ಹೆಸರುಗಳು ಬೊಂಬೆಗಳಿಗೆ ಕಾಯಂ ಹೆಸರುಗಳಾಗಿರಲ್ಲಿಲ. ಅವನು ನೋಡುವ ಸಿನಿಮಾದ ನಾಯಕಿಯರು ಬದಲಾದಂತೆ ಹೆಸರುಗಳೂ ಬದಲಾಗುತ್ತ್ದಿದವು. ಹೆಸರಿನಂತೆ ವಾರಕ್ಕೆ ಒಮ್ಮೆ ಬೊಂಬೆಗಳ ಸೀರೆ ಬದಲಾಗುತ್ತಿತ್ತು. ಅವುಗಳಿಗೆ ಮೊದ ಮೊದಲು ಸೀರೆ ಉಡಿಸುವಾಗ ಶರಣನ ಕೈ ನಸು ನಡಗುತ್ತಿತ್ತು. ಅವುಗಳ ಸಪಾಟು ಜಾಗಗಳು ಅವನು ಈವರೆಗೆ ಕಾಣದೇ ಉಳಿದ ಜಾಗಗಳಾಗ್ದಿದವು.
ಅವನು ಸೀರೆ ಉಡಿಸುವಾಗಲ್ಲೆಲ ಅಂಗಡಿಯ ಕೆಲಸದ ಹುಡುಗಿಯರು ನಾಚಿಕೆ ಬಿಟ್ಟು ``ಅದ್ಹೇಗೋ ಶರಣ್, ಲಂಗ, ಬ್ರಾ ಏನೂ ಇಲದೆ ಸೀರೆ ಉಡಿಸ್ತೀ?'' ಎಂದು ಇವನು ನಾಚಿಕೆಯಿಂದ ಕೆಂಪಾಗುವುದನ್ನು ನೋಡಿ ನಗುತ್ತ್ದಿದರು. ಆಗ್ಲೆಲ ಅವನು ``ನಿಮಗೆ ಅವ್ಲೆಲ ಗೊತ್ತಾಗುವುದ್ಲಿಲ ಸುಮ್ನಿರಿ'' ಎಂದು ಬೇಗ ಬೇಗ ಕೆಲಸ ಮುಗಿಸಲು ನೋಡುತ್ತ್ದಿದ. ಅಷ್ಟಕ್ಕೆ ಅವರು ಬಿಡದೆ, ``ಇದು ಒಳ್ಳೆ ಕತೆಯಾಯ್ತ್ಲಲ ಮಾರಾಯ. ನಮಗೇ ಗೊತ್ತ್ಲಿಲವೆಂದರೆ ಹೇಗೆ?'' ಎಂದು ಅವನನ್ನು ಸಿಟ್ಟಿಗೆಬ್ಬಿಸುತ್ತ್ದಿದರು.
``ಹೆಂಗಸರ ವಿಷಯ ಅವರಿಗಿಂತ ಗಂಡಸರಿಗೇ ಹೆಚ್ಚು ಗೊತ್ತಿರ್‍ತದೆ'' ಎಂದು ಬೇರೆ ಈ ಕೆಲಸ ಬಿಟ್ಟು ಬೇರೆ ಕೆಲಸ ಶುರು ಮಾಡುತ್ತ್ದಿದ.
* * *
ಅಂಗಡಿಗೆ ಎದುರಿನ ಫೋನ್ ಬೂತ್ ಕಂ ಜೆರಾಕ್ಸ್‌ನ ಮಾನಸಿ ಬಂದರಂತೂ ಶರಣನಿಗೆ ಪೀಕಲಾಟವಾಗುತ್ತಿತ್ತು. ಒಮ್ಮೆಯಂತೂ ನೇರವಾಗಿ ಇವನ್ದಿದ್ಲಲಿಗೆ ಬಂದು ಒಳ ಉಡುಪುಗಳನ್ನು ಕೇಳ್ದಿದಳು. ಮೊದಲಿಗೆ ಅವಳನ್ನು ಹುಡುಗಿಯರು ಇರುವ ಕೌಂಟರಿಗೆ ಕಳಿಸಲು ನೋಡಿದ. ಆಗ ಅವಳು ``ನೀವು ಇಲಿರುವುದು ಯಾಕೆ'' ಎಂದು ದಬಾಯಿಸಿ ಬ್ರಾ ಕೊಡಲು ಕೇಳ್ದಿದಳು. ಇವನು ``ಸೈಜು?'' ಎಂದು ಕಣ್ಣು ಬೇಡವೆಂದರೂ ಅವಳ ಎದೆಯ ಮೇಲೆ ಹೋಗಿ ``ಮೂವತ್ತಾನಾಲ್ಕು'' ಎಂದು ತೊದಲ್ದಿದ. ``ಇಲ, ಮೂವತ್ತೆರಡದನ್ನು ಕೊಡಿ'' ಎಂದು ಬೇರೆ ಯಾರಿಗೋ ಅದನ್ನು ತಕ್ಕೊಂಡು ಹೋಗ್ದಿದಳು. ಬೇರೆ ಯಾವುದೇ ಹೆಂಗಸರು ಬಂದು, ಏನೇ ಕೇಳಿದರೂ ಅವನಿಗೆ ಇಷ್ಟು ಮೈ ನಡಗುತ್ತಿರಲ್ಲಿಲ. ಅವರು ಕೇಳ್ದಿದನ್ನು ಸೈಜು, ಇತ್ಯಾದಿಗಳನ್ನು ಹೇಳುವ ಮೊದಲೇ ತೆಗೆದು ಕೊಡುತ್ತ್ದಿದ. ಇದ್ಲಲದೆ ಅವುಗಳ ಬಾಳಿಕೆ, ಉಪಯೋಗದ ಬಗ್ಗೆ ಯಾವುದೇ ಮುಲಾಜ್ಲಿಲದೆ- ಹಿಂದೆ ಮಕ್ಕಳ ಆಟಿಕೆ ಮಾರುತ್ತ್ದಿದಾಗ ಹೇಳುವಂತೆ ಹೇಳುತ್ತ್ದಿದ. ಆದರೆ ಅವಳು ಬಂದರೆ ಒಂದು ಸಣ್ಣ ನಡುಕ ಕಾಲಿನ ಹೆಬ್ಬೆರಳಿನಿಂದ ಶುರುವಾಗುತ್ತಿತ್ತು.
ಯಾವುದೇ ಫೋನ್ ಮಾಡುವುದ್ದಿದರೂ ಶರಣ ಎದುರಿನ ಅಂಗಡಿಗೇ ಹೋಗುವುದಿತ್ತು. ಹಾಗೆ ಇವನು ಹೋದಾಗಲ್ಲೆಲ ``ಓಹ್, ರಾಯರು ಇವತ್ತೆಷ್ಟು ಹೆಂಗಸರಿಗೆ ಸೀರೆ ಉಡಿಸಿದಿರಿ?'' ಎಂದು ಕೇಳುತ್ತ್ದಿದಳು. ಇವನು ``ಅಂಥ್ದದೇನ್ಲಿಲ'' ಎಂದು ಮಳ್ಳ ನಗೆಯಾಡಿ ಬಂದುಬಿಡುತ್ತ್ದಿದ. ಅವಕ್ಕ್ಲೆಲ ಉತ್ತರಗಳು ಆಮೇಲೆ ಅವನಿಗೆ ಹೊಳೆಯುತ್ತ್ದಿದವು.
ಇವ್ಲೆಲ ಬಹಳ ಹಿಂದಿನ ಮಾತಾಯ್ತು. ``ಈ ನವಿಲು ಬಣ್ಣದ ಸೀರೆ ನಿಮಗೆ ಹೊಂದುತ್ತದೆ. ನಿಮ್ಮ ಬಣ್ಣಕ್ಕೂ ಅದು ಸರಿ ಹೋಗುತ್ತದೆ'' ಎನ್ನುತ್ತಿರುವಾಗ ಮಾನಸಿ ಶರಣನನ್ನು ಹುಡುಕಿಕೊಂಡು ಅಂಗಡಿಗೇ ಬಂದಳು. `ಇವಳ್ಯಾಕೆ ಬಂದಳು' ಅಂದುಕೊಳ್ಳುತ್ತ ಅವನು ಎದಾಗ, ಅವಳೇ ತಾನು ಈಗಲೇ ಊರಿಗೆ ಹೋಗಬೇಕಾಗಿದೆ ಅಂದ್ದಿದಳು. ``ಬಸ್ಸಿಗೆ ಕೊಡುವುದಕ್ಕೂ ದುಡ್ಡ್ಲಿಲ ಮಾರಾಯ, ಬಂದ ಕೂಡಲೇ ಕೊಡ್ತೇನೆ'' ಅಂದಳು ಅವನೊಡನೆ. ನಿಸ್ಸಹಾಯಕತೆಯ್ಲಲಿ ನಿಂತ್ದಿದ ಅವಳು ಆಟವೊಂದರ್‍ಲಲಿ ಸೋತು ಬಂದ ದಣಿದ ಹುಡುಗಿಯಂತೆ ಕಂಡ್ದಿದಳು. ಶರಣ ಏನನ್ನೂ ಕೇಳಲು ಹೋಗದೆ ಅವಳಿಗೆ ದುಡ್ಡು ಕೊಟ್ಟವನೆ ``ಮತ್ತೇನಾದರೂ ಮದತ್ ಮಾಡಬೇಕ್ದಿದರೆ ಕೇಳು ಭೀಡೆ ಬೇಡ'' ಅಂದ್ದಿದ.
ಮಾನಸಿ ಊರಿಗೆ ಹೋಗಿ ಬಂದು ದುಡ್ಡನ್ನು ಮರಳಿಸಿದಾಗಲೂ ಶರಣ್ ಯಾಕೆ ಊರಿಗೆ ಹೋಗ್ದಿದೆ, ಏನು ಕತೆ ಎಂದು ಅವಳೊಡನೆ ಕೇಳಿರಲ್ಲಿಲ. ಇದಾದ ಮೇಲೆಯೇ ಅವರ ನಡುವಿನ ಭೇಟಿಗಳು ಹೆಚ್ಚುತ್ತ ನಡೆದವು.
``ಏನೋ ಕೃಷ್ಣ ಪರಮಾತ್ಮನೆ ನಿನ್ನ ಸಖಿಯರ್‍ಲೆಲ ಸೌಖ್ಯವೆ?'' ಎಂದು ಅವಳೆಂದರೆ ಇವನು ``ಹೌದು ಸಖಿ, ನನ್ನ ಹೊರತಾಗಿ ಎಲರೂ ಸೌಖ್ಯ'' ಎನ್ನುವನು. ಒಂದೊಂದು ಸಲ ಇದು ಇಷ್ಟಕ್ಕೆ ಮುಗಿಯದೆ ``ನಿನ್ನ ಹೀರೋಯಿನ್, ಏನದು ಅವಳ ಹೆಸರು ರಮ್ಯ, ಸೊಂಟ ತೋರಿಸುವುದು ಜಾಸ್ತಿ ಆಯಿತು. ನಿನ್ನ ಕನಸ್ಲಲಿ ಬಂದಾಗ ಹೇಳವಳಿಗೆ- ಕಡಿಮೆ ತೋರಿಸಲು'' ಅಂದು ನಗುತ್ತ್ದಿದಳು. ಅದಕ್ಕವನು ತಡೆಯಲಾಗದೆ ``ತೋರಿಸುವವಳು ಅವಳು, ಅದು ಅವಳಿಗೆ ಸಂಬಂಧಿಸ್ದಿದು. ನೋಡಲು ಆಗದ್ದಿದರೆ ಕಣ್ಣು ಮುಚ್ಚಿಕೊ'' ಅನ್ನುವನು. ಆ ಮಾತನ್ನು ಮರೆಸಲು ಎಂಬಂತೆ ``ಅಲವೂ ಮಾರಾಯ, ಬೇರೆಯವರ ಹೆಂಡತಿಗೆ ಸೀರೆ ಉಡಿಸುವದೇ ಆಯಿತು ನಿನ್ನದು. ನಿನ್ನ ಹೆಂಡತಿಗೆ ಉಡಿಸುವುದು ಯಾವಾಗ?'' ಎಂದು ಕೇಳ್ದಿದಳು.
ಒಮ್ಮೊಮ್ಮೆ ಅಪರಿಚಿತ ಅಂಗಡಿಗಳು, ಜನರೇ ತುಂಬಿರುವ ಬೀದಿಗಳ್ಲಲಿ, ಮನೆಗಳು ಇರುವ ಗ್ಲಲಿಗಳ್ಲಲಿ ಸುತ್ತಾಡುವಾಗ ಅವಳ ಮೈಗೆ ಮೈ ತಾಕಿದರೆ, ಕೈಗೆ ಕೈ ಸೋಕಿದರೆ ಇವನು ತನ್ನ ಗ್ಲಲಕ್ಕೆ ಕೈತಾಕಿಸಿ ತಪ್ಪಾಯಿತು ಅನ್ನುವಂತೆ ಎದೆಯ ಮೇಲೆ ಹಸ್ತವನ್ನಿಡುವನು. ಆಗ್ಲೆಲ ಅವಳು ``ಏನೋ ಮಗನೆ, ನೀವು ಗಂಡಸರದು ಇದೇ ಆಯ್ತು ನೋಡು. ಬೇಕು ಅಂತಲೇ ಮೈ ಮುಟ್ಟುವುದು ಆ ಮೇಲೆ ಏನೂ ಆಗದ್ದಿದವರ ಹಾಗೆ ತಪ್ಪಾಯ್ತು ಅನ್ನುವುದು. ನಿಮಗೆ, ಅದೆ, ಗಂಡಸರಿಗೆ ಅದೆಂಥ ಚಾಳಿಯೋ ಹೆಂಗಸರ ಮೈ ಮುಟ್ಟುವುದು? ಅದೇನು ಮಜಾ ಸಿಕ್ಕುತ್ತದೆ ಅದರ್‍ಲಲಿ? ಇದ್ಲೆಲ ನಿನಗೆ ಹೇಳ್ದಿದ್ಲಲವೊ. ಹೌದು, ನಾನ್ಯಾಕೆ ನಿನ್ನ ಮುಟ್ಟಬಾರದು?'' ಎನ್ನುತ್ತ ಅವನ ಕೈ ಹಿಡಿದು ನಡೆದ್ದಿದಳು. ಆಗ್ಲೆಲ ಶರಣ್‌ಗೆ ಒಂದು ನಮೂನೆಯಾಗಿ ಒಳಗೊಳಗೇ ಬೆವರ್‍ದಿದ. ಇದು ಇಷ್ಟಕ್ಕೆ ಮುಗಿಯದೆ ಮಧ್ಯಾಹ್ನದ ಊಟಕ್ಕೆ, ಸಂಜೆಯ ಒಂದು ಸಿಂಗಲ್ ಚಹಕ್ಕೆ ಒಬ್ಬರಿಗೊಬ್ಬರು ಕರೆಯುವವರೆಗೆ ನಡೆದಿತ್ತು.
***
``ಅಲವೊ. ನಿನ್ನ ಮಾಧುರಿಯ ಸೆರಗು ಸರಿಯಾದ ರೀತಿಯ್ಲಲೇ ಇಲ. ನೋಡಿದ ಮಂದಿ ಏನಂತಾರೆ. ಅದನ್ನು ಸರಿ ಮಾಡಿ ಬಾ. ಮಧುರೈನಿಂದ ಹೊಸ ಮಾಲು ಬಂದಿದೆ. ಅದಕ್ಕೊಂದು ರೇಟು ಮಾಡುವಾ'' ಅಂದ್ದಿದ ಮೂಲಕ ಪ್ರಭಾಕರ ಊಟ ಮಾಡಿ ಬರುತ್ತ್ದಿದ ಶರಣ್‌ಗೆ.
``ನೋಡು, ಈ ಕಾಲದ್ಲಲೂ ಪತ್ರ ಬರೆಯುವವರ್‍ದಿದಾರೆ ನಿನಗೆ. ತಕೋ ಈ ಪತ್ರ ನಿನ್ನೆಯೇ ಬಂದಿತ್ತು. ನಿನಗೆ ಕೊಡಲು ಮರೆತೇ ಹೋಗಿತ್ತು. ನೋಡು'' ಪ್ರಭಾಕರ ಇವನ ಕೈಗೆ ಪತ್ರವನ್ನು ಇಟ್ಟ.
ಸಂಜೆಯಾಗುತ್ತ್ದಿದಂತೆ ಮೊಮ್ಮಕ್ಕಳು, ಮಗ, ಸೊಸೆಯರನ್ನು ಕಾಯುತ್ತ ಕೂತಿರುತ್ತ್ದಿದ ಕೆಳಗಿನ ಮನೆ ಅಜ್ಜಿಯನ್ನು ನೋಡಿ, ಊರ್‍ಲಲಿರುವ ತಾಯಿಯ ನೆನಪಾಗಿ ಅವಳಿಗೊಂದು ಕಾರ್ಡು ಬರೆದು ಹಾಕ್ದಿದ. ಬರೆದಂತೆ ಅದನ್ನು ಮರೆತ್ದಿದ ಕೂಡ. ಈಗ ಅಕಾರಣವಾಗಿ ಮರೆತ ನಂಟಿನ ಕೊಂಡಿಯೊಂದು ಹುಡುಕಿಕೊಂಡು ಬಂದಿತ್ತು.
ಅವ್ವ ಪುರುಷೋತ್ತಮ ಮಾಸ್ತರ ಕೈಯ್ಲಲಿ ಪತ್ರ ಬರೆಸ್ದಿದಳು. ``ರಜೆ ಇದಾಗ ಊರಿಗೆ ಬಂದು ಹೋಗುವಂತೆ ಬರೆದ್ದಿದ ಮಾಸ್ತರು- ``ತಪ್ಪು ತಿಳಿದುಕೊಳ್ಳ ಬೇಡ. ನಾವ್ಲೆಲ ನೀನು ಸತ್ತೇ ಹೋಗ್ದಿದೆವೆಂದು ತಿಳಿದ್ದಿದವು. ಇಲಿ ಯಾವುದೂ ಸರಿಯಾಗ್ಲಿಲ. ಯಾವುದಕ್ಕೂ ಸಮಯಸಿಕ್ಕಾಗ ಬಂದು ಹೋಗು'' ಎಂದು ತಮ್ಮ ಎರಡು ಮಾತುಗಳನ್ನು ಬರೆದು ಪತ್ರ ಮುಗಿಸ್ದಿದರು.
``ನೋಡುವಾ, ಹೋದಾಗ ಹೋದರಾಯ್ತು'' ಅಂದು ಪತ್ರವನ್ನು ಕಿಸೆಗೆ ಮಡಚಿ ಹಾಕಿದ ಶರಣ್‌ಗೆ- `ನಮ್ಮ ಅವ್ವನಿಗೇ ಬಹಳ ವರ್ಷಗಳಿಂದ ದೂರವೇ ಉಳಿದ್ದಿದ ಮಗ ಮನೆಗೆ ಬಂದೇ ಹೋಗಲಿ, ಎಂಬ ಒತ್ತಾಯ ಇಲವ್ಲಲ' ಎಂಬುದು ಮನಸ್ಸಿಗೆ ಬಂದುಹೋಯ್ತು.
***
ಫೋಟೋ ಸ್ಟುಡಿಯೋದ್ಲಲಿ ಸಿಕ್ಕ ಸಿನಿಮಾ ಬ್ಲಾಕ್ ಟಿಕೆಟ್‌ನ ಸಹದ್ಯೋಗಿ ಹಾಗೂ ದೋಸ್ತ್ ಪರಮೇಶ ``ಏನೋ, ನಿನ್ನ ಏನೋ ಅಂದುಕೊಂಡ್ದಿದೆ. ಯಾವುದೋ ಹಕ್ಕಿಯನ್ನು ಪಟಾಯಿಸಿಕೊಂಡು ಹಾರಾಡಿಸುತ್ತ್ದಿದೀಯಂತೆ. ಬಿಡು, ಮೊದಲೇ ನೀನು ಈ ದಾರಿಗೆ ಬರಬೇಕಿತ್ತು. ಇಬ್ಬರಿಗೂ ಒಂದು ದಿಕ್ಕಾಯಿತು'' ಅಂದವನು ಮಾನಸಿಯ ಹಿಂದು ಮುಂದು ಏನೆಂದು ಕೇಳಿದ. ಅವನ ಮಾತಿಗೆ ಶರಣ್ ``ನೀನು ತಿಳಿದುಕೊಂಡಂತ್ದದು ಏನ್ಲಿಲ ಮಾರಾಯ. ಅವಕ್ಕ್ಲೆಲ ನೀನು ಬಣ್ಣಕಟ್ಟಬೇಡ'' ಅಂದ. ``ವ್ಹಾರೆವಾಹ್! ಬಡ್ಡೀ ಮಗನೆ. ನನಗೇ ಹಿಂದಿನಿಂದ ಹೆಟ್ಟುತ್ತ್ದಿದಿಯಾ? ಎಲರೂ ಮೊದ ಮೊದಲು ಹೇಳುವುದು ಹೀಗೆಯೇ. ನಾನೇ ನಿಮ್ಮಿಬ್ಬರನ್ನು ಬರ್ಮಾಬಜಾರ್‌ನ್ಲಲಿ ನೋಡ್ದಿದೇನ್ಲಲ. ಆಹಾ ಅದೆಂಥ ಘನವಾದ ನಗು ನಿಮ್ಮಿಬ್ಬರದು! ನಾನು ನೀವಿಬ್ಬರೂ ಇಲಿ ಫೋಟೋ ತೆಗೆಸಿಕೊಳ್ಳಲು ಬಂದ್ದಿದೀರೆಂದು ಅಂದುಕೊಂಡ್ದಿದೆ. ಮದುವೆಗೆ ಕರಿ ಮಾರಾಯ. ಮದುವೆಯ ಫೋಟೋ ಖರ್ಚು ನಂದೇ. ಮರೀಬೇಡ'' ಎಂದು ಒಂದು ಹಲ್ಕಟ್ ನಗು ನಕ್ಕು ಇವನ ಹೆಗಲ ಮೇಲೆ ಹಗುರವಾಗಿ ಹೋಗ್ದಿದ.
ಶರಣ್‌ಗೆ ಹೀಗೆಂದವರು ಪರಮೇಶ ಒಬ್ಬನೇ ಆಗಿರಲ್ಲಿಲ. ಅಂಗಡಿ ಮಾಲಿಕ ಪ್ರಭಾಕರ, ಇವನು ಚಾ ಕುಡಿದು ತುಸು ತಡವಾಗಿ ಬಂದ್ದುದಕ್ಕೆ ``ನಿಮ್ಮಿಬ್ಬರ ಮಾತುಕತೆ ಎಲ ಬಹಳ ಜೋರು ಇರಬೇಕು. ಹುಶಾರಾಗಿರು ಮಾರಾಯ, ಅವಳು ನಿನ್ನ ತೊಡೆ ನಡುವೆ ಹಾಕಿಕೊಂಡು ಬಿಡುತ್ತಾಳೆ. ಅದ್ಲೆಲ ಹಾಳಾಗಿ ಹೋಗಲಿ, ನಿನ್ನ ವಿಷಯ ನಂಗ್ಯಾಕೆ. ಈ ಹುಡುಗಿಯರನ್ನ ಅಂಗಡಿಯ ಬಾಗಿಲವರೆಗೆ ಮಾತ್ರ ತರಬೇಡ'' ಎಂದ್ದಿದ ಅವತ್ತಿನ ವ್ಯಾಪಾರದ ದುಡ್ಡನ್ನು ಲೆಕ್ಕ ಮಾಡುತ್ತ. ಕೆಲಸದ ಹುಡುಗಿಯರ ಮಾತಿನ ನಡುವೆಯೂ ಇದೇ ಚರ್ಚೆಯಾಗುತ್ತಿತ್ತೆಂದು ಅವನಿಗೆ ಆಗಾಗ ಕಿವಿ ಮೇಲೆ ಬ್ದಿದ ಸಂಗತಿಯಾಗಿತ್ತು. ಇದು ಈ ನಮೂನೆಯ ಹೊಸಬಣ್ಣಕ್ಕೆ ತಿರುಗುತ್ತದೆ ಎಂಬುದನ್ನು ಅವನು ಊಹಿಸಿದವನಾಗಿರಲ್ಲಿಲ. ಈ ಸಂಗತಿಯ ಬಗ್ಗೆ ಅವಳನ್ನೇ ಕೇಳಬೇಕೆಂದು ಕೊಂಡರೆ, ``ನಾವ್ಲೆಲ ಹುಡುಗಿಯರು ನೀನು ಅಂಗಡಿಯ ಶೋಕೇಸಿನ್ಲಲಿ ನ್ಲಿಲಿಸಿರುತ್ತೀಯ್ಲಲ. ಆ ಬೊಂಬೆಗಳ ಹಾಗೆ. ಅವುಗಳ ಇಸ್ತ್ರಿ ಮುಕ್ಕಾಗಬಾರದು. ಅದರಿಂದಲೇ ಅವುಗಳ ಶೋಭೆ. ಅವನ್ನು ನೋಡಿಯೇ ಖರೀದಿ ಆಗಬೇಕು. ನಾವೂ ಹಾಗೆಯೇ. ಅವುಗಳಂತೆ ಪ್ರದರ್ಶನದ ಬೊಂಬೆಗಳು'' ಅಂದ್ದಿದಳು. ಅವನು ಕೇಳ್ದಿದಕ್ಕೂ ಅವಳ ಮಾತಿಗೂ ಯಾವುದೇ ಸಂಬಂಧ ಹೊಳೆದಿರಲ್ಲಿಲ. ಈ ಅವಳ ಅಕಾರಣ ಮಾತಿನ ಬಗ್ಗೆ ಕೇಳಿದಾಗ, ``ಎಲದಕ್ಕೂ ಸಂಬಂಧ ಕೂಡಿಸಬೇಡ ನೀನು. ಅದು ತನ್ನಿಂದ ತಾನೇ ಆಗುವಂಥ್ದದು'' ಎಂದ್ದಿದಳು. ಟೆಲಿಫೋನ್ ಬೂತಿನ್ಲಲಿ ಯಾರ್‍ಯಾರಿಗೋ ನಂಬರು ಹಚ್ಚಿಕೊಡುವ, ಯಾವುದೋ ಹುಡುಗಿಯ ಮನೆಗೆ ಹುಡುಗನ ಪರವಾಗಿ ಮಾತಾಡಿ ಅವನ ಕೈಗೆ ಫೋನ್ ಕೊಡುವ, ಕಾಗದಗಳನ್ನು ಜೆರಾಕ್ಸ್ ಮಾಡಿಕೊಡುವ, ತನ್ನ ಸ್ವಂತ ಬದುಕಿನ ದಿನಗಳನ್ನು ಹಿಂದಿನ ದಿನದ ಜೆರಾಕ್ಸ್‌ನೆಂತೆಯೇ ಬದುಕುವ ಈ ಮಾನಸಿ ಎಂಬ ಹುಡುಗಿ ಯಾರು, ಕಾರವಾರದ ಮಾಜಾಳಿಯಿಂದ ಹಲವಾರು ನದಿಗಳನ್ನು, ಊರುಗಳನ್ನು ಹಾದು ಇಲಿಗೆ ಬಂದು ಮುಟ್ಟಿದ ನದಿ ತೀರದ ಊರಿನ ಹುಡುಗ ಶರಣ್ ಪಾರುಮನೆಗೂ ಏನಾಗಬೇಕು? ಎಲಿಂದಲೋ ಬಂದ ದಾರಿಗಳು ಈ ಒಂದು ಕೇಂದ್ರವೊಂದರ್‍ಲಲಿ ಕೂಡುವುದು ಅಂದರೇನು? ಅದಕ್ಕೊಂದು ಕಾರಣ, ತರ್ಕ ಒಂದೂ ಇಲವೆ? ಅಂದುಕೊಳ್ಳುವನು ಶರಣ್. ಆದರೆ ತನ್ನ ಬದುಕಿನ ಗುಟ್ಟನ್ನು ``ನಿಮಗ್ಯಾರಿಗೂ ಸಂಬಂಧಿಸ್ದಿದ್ಲಲವೊ ಅದು, ಮಕ್ಕಳ್ರಾ, ನೀವೇನು ಮಾಡಿದಿರಿ, ನೀವೇನು ಕನಸು ಕಂಡ್ದಿದೀರಿ, ಎಂದು ಯಾವತ್ತಾದರೂ ನಿಮಗೆ ಕೇಳ್ದಿದೇನೆಯೆ'' ಎನ್ನುವಂತೆ ಅವಳ್ದಿದಳು.
ಮನೆ ಎಲಿ, ಮನೆಯ್ಲಲಿ ಯಾರ್‍ಲೆಲ ಇದಾರೆ ಎಂದು ಶರಣ್ ಕೇಳಿದಾಗ ``ಅವ್ಲೆಲ ತಕ್ಕೊಂಡು ನೀನೇನು ಮಾಡ್ತಿ? ಇನ್ನೊಂದಿಷ್ಟು ಜನರಿಗೆ ಹೇಳಬಹುದು ಎಂದೆ?'' ಎಂದ್ದಿದಳು. ಆಗ ಇವಳ ಸಹವಾಸವೇ ಬೇಡವೆನ್ನಿಸಿತ್ತು ಅವನಿಗೆ. ಆದರೆ ನಮ್ಮಿಬ್ಬರ ಒಡನಾಟಕ್ಕೆ ಏನೆನ್ನಬೇಕು? ಎಂಬುದನ್ನು ಮಾತ್ರ ಕೇಳಬೇಕೆಂದುಕೊಂಡ್ದಿದ. ಆದರೆ ಅವಳನ್ನು ಕೇಳಿದರೆ ಬೇರೆ ಉತ್ತರವೇ ಬರುತ್ತದೆ. ಉತ್ತರ ಬೇಕೇ ಅಂದ್ದಿದರೆ ಅದನ್ನು ಅವಳ ಹೆಸರಿನ ಬೊಂಬೆಗೆ ಕೇಳಬೇಕಷ್ಟೆ ಅಂದು ಕೊಂಡ್ದಿದ.
ಅವತ್ತು ಅಂಗಡಿಗೆ ವಾರದ ರಜೆ. ``ನೀನು ನಾಳೆ ಅದನ್ನು ಸಂಜೆಯ ಹೊತ್ತಿಗೆ ಎಂಥ ಕೆಲಸವ್ದಿದರೂ ಸಿಕ್ಕಲೇ ಬೇಕು'' ಎಂದ್ದಿದ ಮಾನಸಿಗೆ ಇಲವೆನ್ನಲು ಆಗಿರಲ್ಲಿಲ. ಇಂಥ ರಜೆಯ ದಿನಗಳ್ಲಲಿಯೇ ಅವರ ತಿರುಗಾಟ ನಡೆಯುತ್ತ್ದಿದು. ಮತ್ತು ಅದು ಅನೇಕರ ಮಾತುಗಳ್ಲಲಿ ಪುಕ್ಕ ಒಡೆದು, ರೆಕ್ಕೆ ಬಿಚ್ಚಿ ಹಾರಾಡ್ದಿದು.
ಪ್ಲಲವಿ ಟಾಕೀಸ್ ಎದುರು ಇವನು ಬಂದ ಹತ್ತೇ ಮಿನಿಟಿನ್ಲಲಿ ಅವಳೂ ಬಂದ್ದಿದಳು. ಜನರ ನಡುವೆ ಹಾದಿ ಮಾಡಿಕೊಂಡು ಪಾರ್ಕಿನ ಹತ್ತಿರ ಹೆಜ್ಜೆ ಹಾಕುವಾಗ ಬಿಸಿಲು ಬಾಡಲು ಬಂದಿತ್ತು.
``ನೀನು ಮದುವೆಯಾಗುವಾ ಎಂದರೆ ನಮ್ಮಿಬ್ಬರ ಮದುವೆ. ಅಕ್ಕ, ತಂಗಿ, ದೋಸ್ತಿ, ಈ ತರಹದ ಸಂಬಂಧ ಎಂದರೆ ಅದ್ಲೆಲ ಬೇಡ. ನಮ್ಮ ಈ ತಿರುಗಾಟ, ಭೇಟಿ ಇದಕ್ಕ್ಲೆಲ ಯಾವ ಅರ್ಥ'' ಎಂಬುದನ್ನು ಶರಣ ಇವತ್ತಾದರೂ ಕೇಳುವುದೆಂದುಕೊಂಡ್ದಿದ. ಆದರೆ ಅದನ್ನು ಎಂದಿಗೂ ನಾನು ಅವಳನ್ನು ಕೇಳಲಾರೆ ಎಂಬುದು ಅವನಿಗೆ ಖಚಿತವಿತ್ತು.
ನಡೆಯುತ್ತ್ದಿದಂತೆ ತಟ್ಟನೆ ಶರಣಾನ ಕೈಹಿಡಿದು ತನ್ನ ಹೊಟ್ಟೆಯ ಮೇಲಿಟ್ಟುಕೊಂಡ ಮಾನಸಿ ``ಏನೆನ್ನಿಸುತ್ತದೆಯೋ ನಿಂಗೆ?'' ಅಂದಳು. ಮಾತು ಚಳಿಗೆ ನಡುಗುತ್ತ್ದಿದವರಂತಿತ್ತು. ``ಏನು, ಏನಾಯ್ತು'' ಅಂದ ಶರಣನಿಗೆ ``ಇದಕ್ಕೆ ಮೂರು ತಿಂಗಳಾಯ್ತು, ಹೊಟ್ಟೆ ಕಾಣದಿರಲಿ ಎಂದು ಚೂಡಿದಾರ ಹಾಕುತ್ತ್ದಿದೆ. ಮೊದಲೂ ಅದನ್ನೆ ಹಾಕುತ್ತ್ದಿದೆ ಅನ್ನು. ಈ ಹೊಟ್ಟೆಯೊಳಗಿನ ಪಿಂಡಕ್ಕೆ ಕಾರಣನಾದವನೊಂದಿಗೇ ನನ್ನ ಮದುವೆಯಿದೆ. ಅವನು ಯಾರು, ಹೆಸರೇನೆಂದು ಕೇಳಬೇಡ. ಮದುವೆಗೆ ನಿನ್ನ ಕರೆಯುವುದ್ಲಿಲ'' ಎಂದವಳ ಕಣ್ಣಿನ್ಲಲಿ ಬೆಳಕಿನ ಕಿರಣವೊಂದು ಕಣ್ಣಹನಿಯ ತುದಿಯ್ಲಲಿ ಮಿಂಚಿತೆ ಎಂಬುದು ಅವನಿಗೆ ಗೊತ್ತಾಗಲ್ಲಿಲ. ``ಇದಕ್ಕ್ಲೆಲ ಕಾರಣ ನೀನಂತೂ ಅಲ ಬಿಡು! ಅದಕ್ಕೂ ಧೈರ್ಯ ಬೇಕಾಗ್ತದೆ'' ಎಂದು ಅವನ ತೋಳಿಗೆ ಹೊಡೆದು ಮರುಕ್ಷಣವೇ ನಕ್ಕ್ದಿದಳು. ಈ ಮಾತನ್ನು ಇದೊಂದೇ ತನ್ನ ಬದುಕಿನ ಗುಟ್ಟು ಎನ್ನುವಂತೆ ಹೇಳಿದಳೆಂದು ಶರಣ್‌ಗೆ ಭಾಸವಾಯ್ತು. ಕ್ಲಲಿನ ಬೆಂಚಿನ ಮೇಲೆ ಕೂತುಕೊಳ್ಳುತ್ತ, ಅವನ ಕೈಹಿಡಿದು, ``ಈ ಚೂಡಿದಾರಗಳ್ಲಲಿಯೇ ಕಾಲ ಕಳೆದೆ. ನನಗೆ ಈಗಲೂ ಸೀರೆ ಉಡಲು ಬರುವುದ್ಲಿಲ. ನನಗೂ ಒಂದು ಸಾರಿ ಸೀರೆ ಉಡಿಸ್ತಿಯಾ? ನನ್ನ ನಿಮ್ಮ ಶೋಕೇಸಿನ್ಲಲಿರುವ ಬೊಂಬೆ ಎಂದು ತಿಳಿದುಕೊಂಡು?'' ಎಂದು ಕೇಳಿದ ಅವಳ ಮಾತಿನ್ಲಲಿ ಮಗುವಿನ ಯಾಚನೆಯಿತ್ತು. ಅವಳ ದೃಷ್ಟಿ ಕೂಡಿಸುವುದನ್ನು ತಪ್ಪಿಸಿ ``ಆಯ್ತು, ಆಯ್ತು'' ಅಂದ ಶರಣ್. ಅವಳೇ ಮಾತಾಡಿ ``ಇವನ್ನ್ಲೆಲ ನಾನೇ ತಲೆಗೆ ಹಚ್ಚಿಕೊಂಡ್ಲಲ. ನೀನೂ ಹಚ್ಚಿಕೊಳ್ಳಬೇಡ. ಊರಿಂದ ನಿಮ್ಮ ಅವ್ವನ ಪತ್ರ ಬಂದಿತ್ತು ಅಂದ್ದಿದೆ'' ಎಂದಳು.
``ಹೌದು ಮುಂದಿನ ವಾರ ಊರಿಗೆ ಹೋಗ್ತೇನೆ'' ಎಂದು ಅವನಿಂದ ಅಯಾಚಿತವಾಗಿ ಮಾತುಗಳು ಬಂದವು. ಅವನ ಕೈಯ್ಲಲ್ದಿದ ಅವಳ ಕೈಗಳು ತುಂಬ ತಣ್ಣಗ್ದಿದಂತೆ ಅನಿಸಿದವು.

Tuesday, June 19, 2007

Story teller

I like stories. I love to narrate them to anybody who wish to listen. If you are interested send me a letter. If you are a story writter let me read your stories.